ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ಪ್ರಧಾನ ಸುದ್ದಿ

ನಾನು ಸಂತಸದಿಂದ ಕಣ್ಣೀರಿಡುತ್ತಿದ್ದೇನೆ, ಇನ್ನು ಶಾಂತಿಯಿಂದ ಪ್ರಾಣ ಬಿಡಬಹುದು: ಮಮತಾ

ನ್ಯಾನೋ ಯೋಜನೆಯಲ್ಲಿ ಟಾಟಾ ಮೋಟರ್ಸ್ ವಿರುದ್ಧದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ತೀರ್ಪು ತಿಳಿದು "ಸಂತಸದಿಂದ

ಕೋಲ್ಕತ್ತಾ: ನ್ಯಾನೋ ಯೋಜನೆಯಲ್ಲಿ ಟಾಟಾ ಮೋಟರ್ಸ್ ವಿರುದ್ಧದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ತೀರ್ಪು ತಿಳಿದು "ಸಂತಸದಿಂದ ಕಣ್ಣೀರಿಡುತ್ತಿದ್ದೇನೆ" ಮತ್ತು ಇನ್ನು "ಶಾಂತಿಯಿಂದ ಪ್ರಾಣ ಬಿಡಬಹುದು" ಎಂದಿದ್ದಾರೆ. 
ನ್ಯಾನೋ ಕಾರ್ ಯೋಜನೆಗೆ ಹಿಂದಿನ ಎಡ ಪಕ್ಷಗಳ ಸರ್ಕಾರ ಕಾನೂನು ನಿಯಮಗಳನ್ನು ಪಾಲಿಸದೆ ಜಮೀನನ್ನು ವಶಪಡಿಸಿಕೊಂಡಿದೆ ಎಂದು ನಿರ್ಧಾರವನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿತ್ತು. 
"ಇದು ಐತಿಹಾಸಿಕ ಜಯ. ಜನರ ಗೆಲುವಿದು, ಮಾತೆಯ, ನೆಲದ ಮತ್ತು ಜನರ ಗೆಲುವು" ಎಂದು ಬ್ಯಾನರ್ಜಿ ಮಾಧ್ಯಮಗಳಿಗೆ ಹೇಳಿದ್ದಾರೆ. 
"ಸಿಂಗೂರಿನ ಜನ ಎಷ್ಟು ಕಷ್ಣ ಅನುಭವಿಸಿದರು, ಯಾತನೆಗಳನ್ನು ತಡೆದುಕೊಂಡರು ಆದರೆ ಅವರೆಂದು ನನ್ನನ್ನು ಬಿಡಲಿಲ್ಲ. ಈಗ ಸಂತಸದ ಕಣ್ಣೀರಿದೆ. ಸಿಂಗೂರಿನ ರೈತರಿಗೆ ಜಮೀನು ಹಿಂದಿರುಗಿಸುವ ನನ್ನ ವಚನವನ್ನು ನನ್ನ ಸರ್ಕಾರ ಇಲ್ಲಿಯವರೆಗೂ ಪೂರೈಸಲು ಸಾಧ್ಯವಾಗಿರಲಿಲ್ಲ" ಎಂದು ಮಮತಾ ಹೇಳಿದ್ದಾರೆ. 
ಒತ್ತಾಯವುರ್ವಕ ಜಮೀನು ವಶವನ್ನು ವಿರೋಧಿಸಿ ಅಂದು ವಿರೋಧಪಕ್ಷದ ನಾಯಕಿಯಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಡಿಸೆಂಬರ್ 2006 ರಲ್ಲಿ ಕೊಲ್ಕಾತ್ತಾದಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದು ಸಿಂಗೂರಿನಲ್ಲಿ ಎಡಪಕ್ಷಗಳ ಸರ್ಕಾರ ವಶಪಡಿಸಿಕೊಂಡಿದ್ದ 400 ಎಕರೆ ಜಮೀನು ಹಿಂದಿರುಗಿಸಬೇಕೆಂದು ಪಟ್ಟು ಹಿಡಿದಿದ್ದರು.
ನಂತರ 2008 ರಲ್ಲಿ ಕಾರ್ಖಾನೆಯನ್ನು 14 ದಿನಗಳವರೆಗೆ ಮುತ್ತಿಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ನಂದಿಗ್ರಾಮದಲ್ಲಿ ಕೂಡ ಜಮೀನು ವಶಪಡಿಸಿಕೊಳ್ಳುವುದರ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದ ಮಮತಾ ಬ್ಯಾನರ್ಜಿ 2011 ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರು. 
ಆಗ ಟಾಟಾ ಮಂಡಳಿ ಪಶ್ಚಿಮ ಬಂಗಾಳ ತೊರೆದು ಗುಜರಾತಿನ ಸನಂದ್ ನಲ್ಲಿ ಕಾರ್ಖಾನೆ ಸ್ಥಾಪಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

SCROLL FOR NEXT