ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ನಿಮ್ಮ ಪದವಿ ಪ್ರಮಾಣಪತ್ರ ಬಹಿರಂಗಪಡಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ತಮ್ಮ ಶೆಕ್ಷಣಿಕ ಅರ್ಹತೆಯ ಬಗ್ಗೆ ಗೊಂದಲಗಳನ್ನು ಬಗೆಹರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಶೆಕ್ಷಣಿಕ ಅರ್ಹತೆಯ ಬಗ್ಗೆ ಗೊಂದಲಗಳನ್ನು ಬಗೆಹರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. 
ತಮ್ಮ ಗೃಹದಲ್ಲಿ ವರದಿಗಾರರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿ ಅವರು ತಮ್ಮ ಪದವಿಗಳನ್ನು ಬಹಿರಂಗ ಪಡಿಸುವುದಕ್ಕೆ ಹಿಂಜರಿಯುತ್ತಿರುವುದನ್ನು ನೋಡಿದರೆ ಅದರ ಅಧಿಕೃತತೆಯ ಬಗ್ಗೆ ಅನುಮಾನ ಸೃಷ್ಟಿಸುತ್ತದೆ ಎಂದಿದ್ದಾರೆ.
"ಹಿಂದೆ ಮೋದಿ ಅವರು ತಾವು ಕಾಲೇಜಿಗೇ ಹೋಗಿಲ್ಲ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಅವರು ಅಂಚೆ ಶಿಕ್ಷಣ ಪದ್ಧತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿದರು ಅದು ಕೂಡ ನಕಲು ಎಂದು ತಿಳಿಯಿತು" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹೇಳಿದ್ದಾರೆ. 
"ಈ ಪದವಿ ಪ್ರಾಮಾಣಿಕವಾದದ್ದಾಗಿದ್ದರೆ, ಅದನ್ನು ತೋರಿಸಲು ಮೋದಿ ಅವರು ಹಿಂಜರಿಯುತ್ತಿರುವುದೇಕೆ? ಅವರು ಪದವಿಯನ್ನು ಅಡಿಗಿಸಿಟ್ಟಿರುವುದೇಕೆ?" ಎಂದು ಕೂಡ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 
ಕೇಜ್ರಿವಾಲ್ ಅವರು ಪ್ರಧಾನ ಮಾಹಿತಿ ಕಮಿಷನರ್ (ಸಿಐಸಿ) ಅವರ ಮೊರೆ ಹೋಗಿದ್ದ ನಂತರ ಏಪ್ರಿಲ್ ನಲ್ಲಿ ಮೋದಿ ಅವರ ಪದವಿ ಮತ್ತು ಸ್ನಾತ್ತಕೋತ್ತರ ಮಾಹಿತಿಯನ್ನು ಬಹಿರಂಗಪಡಿಸುವಂತೆ ಗುಜರಾತ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಿಗೆ ಸಿಐಸಿ ಸೂಚಿಸಿದ್ದರು. 
ನೋಟು ಹಿಂಪಡೆತ ನಿರ್ಧಾರದ ಮೇಲೆ ಕೂಡ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅರವಿಂದ್ ಕೇಜ್ರಿವಾಲ್, ಈ ನಿರ್ಧಾರದಿಂದ ಉಂಟಾದ ತೊಂದರೆಗಳ ಬಗ್ಗೆ ಮೋದಿಯವರಿಗೆ ಅರಿವಿಲ್ಲ ಜನ ನಂಬಿದ್ದಾರೆ ಆದರೆ ಇದು ಈಗಾಗಲೇ ದೇಶದೆಲ್ಲೆಡೆ ಅವ್ಯವಸ್ಥೆ ಸೃಷ್ಟಿಸಿದೆ. ಆದರೂ ಇದನ್ನು ಅವರು ಹಿಂಪಡೆಯುತ್ತಿಲ್ಲ ಎಂದಿದ್ದಾರೆ .
"ಅವರ ಪದವಿ ಪ್ರಮಾಣಪತ್ರದ ಮೇಲೆ ಇಂದು ಗುಜರಾತ್ ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಮೋದಿ ಪದವಿ ಪ್ರಮಾಣಪತ್ರವನ್ನು ತೋರಿಸಲು ಸಿದ್ಧಾರಾಗಿರುವುದಾಗಿ ಅವರ ಪರ ವಕೀಲ ಹೇಳಬೇಕು" ಎಂದು ಕೂಡ ಕೇಜ್ರಿವಾಲ್ ಹೇಳಿದ್ದು "ನೋಟು ಹಿಂಪಡೆತದ ನಿರ್ಧಾರದ ಮೇಲೆ ಬಂದಿರುವ ದುಡ್ಡನ್ನು ಬ್ಯಾಂಕ್ ಗಳು ಮೋದಿ ಗೆಳೆಯರ ಸಾಲ ಮನ್ನಾ ಮಾಡಲು ಬಳಸಬಾರದು" ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT