ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ 
ಪ್ರಧಾನ ಸುದ್ದಿ

ನಿಮ್ಮ ಅವಧಿಯಲ್ಲಿ ನಡೆದ ಹಗರಣಗಳನ್ನು ವಿವರಿಸಿ; ಚಿದಂಬರಂಗೆ ಬಿಜೆಪಿ ಸವಾಲು

ನಿಮ್ಮ ಕಣ್ಗಾವಲಿನಲ್ಲೇ ನಡೆದ ಹಲವು ಹಗರಣಗಳ ಬಗ್ಗೆ ವಿವರಣೆ ಕೊಡಿ ಎಂದು ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರಿಗೆ ಭಾರತೀಯ ಜನತಾ ಪಕ್ಷ ಶನಿವಾರ ಆಗ್ರಹಿಸಿದೆ.

ನವದೆಹಲಿ: ನಿಮ್ಮ ಕಣ್ಗಾವಲಿನಲ್ಲೇ ನಡೆದ ಹಲವು ಹಗರಣಗಳ ಬಗ್ಗೆ ವಿವರಣೆ ಕೊಡಿ ಎಂದು ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರಿಗೆ ಭಾರತೀಯ ಜನತಾ ಪಕ್ಷ ಶನಿವಾರ ಆಗ್ರಹಿಸಿದೆ. 
"ಚಿದಂಬರಂ ನೋಟು ಹಿಂಪಡೆತ ಕ್ರಮವನ್ನು ಟೀಕಿಸುತ್ತಿದ್ದರೆ ಮತ್ತು ಪ್ರಧಾನಿ ಮೋದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿದ್ದರೆ, ೨೦೦೪ ಮತ್ತು ೨೦೧೪ ರ ನಡುವಿನ ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದದ್ದೆಲ್ಲ ರಾಷ್ಟದ ಹಿತಾಸಕ್ತಿಗೆ ಎಂದು ಅವರು ನಂಬಿದ್ದಾರೆಯೇ" ಎಂದು ಬಿಜೆಪಿ ಮುಖಂಡ ನಳಿನ್ ಕೊಹ್ಲಿ ಪ್ರಶ್ನಿಸಿದ್ದಾರೆ. 
"ಮೊದಲು, ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನೆಯಾದ ಕಪ್ಪು ಹಣದ ಬಗ್ಗೆ ವಿವರಣೆ ನೀಡಲಿ ಅವರು ಮತ್ತು ಅದರಲ್ಲಿ ಅವರ ಪಾತ್ರವೇನು ಎಂದು ವಿವರಿಸಲಿ. ಆ ವಿವರಣೆ ನೀಡಿದ ನಂತರ ಇತರರಿಂದ ಅವರು ವಿವರಣೆ ನಿರೀಕ್ಷಿಸಬಹುದು" ಎಂದು ಕೂಡ ಕೊಹ್ಲಿ ಹೇಳಿದ್ದಾರೆ. 
ಇದಕ್ಕೂ ಮೊದಲು ಚಿದಂಬರ್ ಅವರು ಮೋದಿ, ನೋಟು ಹಿಂಪಡೆತ ನಿರ್ಧಾರ ತಪ್ಪು ಎಂದು ಒಪಿಕೊಳ್ಳಬೇಕು ಎಂದು ಆಗ್ರಹಿಸಿದ್ದರು "೪೫ ಕೋಟಿ ಜನರನ್ನು ಭಿಕ್ಷುಕರನ್ನಾಗಿಸಿರುವ ಮತ್ತು ೪೫ ದಿನಗಳಿಂದ ಮಧ್ಯಮವರ್ಗವನ್ನು ಹೈರಾಣು ಮಾಡಿರುವ ನೋಟು ಹಿಂಪಡೆತ ನಿರ್ಧಾರ ತಪ್ಪು ಎಂದು ಮೋದಿ ಒಪ್ಪಿಕೊಳ್ಳಲಿ" ಎಂದು ಚಿದಂಬರಂ ಆಗ್ರಹಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT