ಮಂಗಳೂರು: ದೇಶದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಯಮ ಪಾಲಿಸದವರಿಗೆ ದಂಡ ವಿಧಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ನಗರದ ಶ್ರೀ ರಾಮಕೃಷ್ಣ ಮಠದಲ್ಲಿ ‘40 ವಾರಗಳ’ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಸಿಂಗಾಪುರ ಸ್ವಚ್ಛವಾಗಿರಲು ಕಾರಣ ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲುವವರಿಗೆ ದಂಡ ವಿಧಿಸುತ್ತಿರುವುದು. ನಮ್ಮಲ್ಲಿ ಏಕಾಏಕಿ ದಂಡ ಹಾಕಲು ಸಾಧ್ಯವಿಲ್ಲ. ಸ್ವಚ್ಛ ಭಾರತ ಆಂದೋಲನದ ಮೂಲಕ ದೇಶಾದ್ಯಂತ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ದಂಡ ಹಾಕುವ ಬಗ್ಗೆ ನಿರ್ಧರಿಸಲಾಗುವುದು ಎಂದರು,
ನಗರದ ಜೀವನ ಅವ್ಯವಸ್ಥಿತವಾಗಿರಬಾರದು ಎಂದ ಕೇಂದ್ರ ಸಚಿವರು, ಸಾರ್ವಜನಿಕ ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಸ್ವಚ್ಛ ಭಾರತ ಮಿಶನ್ ಅಡಿ 2019ರ ವೇಳೆಗೆ 1.04 ಕೋಟಿ ರೂ. ವೈಯಕ್ತಿಕ ಶೌಚಗೃಹ ನಿರ್ವಣ, 5.08 ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ರಾಜಕೀಯವಿಲ್ಲ: 20 ನಗರಗಳನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿರುವುದರಲ್ಲಿ ರಾಜಕೀಯ ಮಾಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಆಯಾ ಮಹಾನಗರ ಪಾಲಿಕೆಗಳು ನೀಡಿದ ಪ್ರಸ್ತಾವನೆ ಆಧಾರದಲ್ಲಿ ತಜ್ಞರ ಸಮಿತಿ ರಾಜಕೀಯ ರಹಿತವಾಗಿ ಸ್ಮಾರ್ಟ್ ಸಿಟಿಗೆ ನಗರಗಳ ಆಯ್ಕೆ ನಡೆಸಿವೆ ಎಂದು ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos