ಪ್ರಧಾನ ಸುದ್ದಿ

ಮುಜಫರ್ ನಗರ ಗಲಭೆ ಪ್ರಕರಣ: ಕೋರ್ಟ್ ಗೆ ಹಾಜರಾದ ಸಾಧ್ವಿ ಪ್ರಾಚಿ

Guruprasad Narayana

ಮುಜಫರ್ ನಗರ: ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದದ್ದರಿಂದ ಕೋರ್ಟ್ ಕಳುಹಿಸಿದ್ದ ಹಲವಾರು ವಾರಂಟ್ ಗಳ ನಂತರ ಇಂದು ವಿ ಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ, ೨೦೧೩ರ ಮುಜಫರ್ ನಗರ ಗಲಭೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

೨೦೦೦೦ ರೂ ಬಾಂಡ್ ನೀಡಿ ಮುಂದಿನ ದಿನಾಂಕಕ್ಕೆ ಕೋರ್ಟ್ ಗೆ ಹಾಜರಾಗುತ್ತೇನೆ ಎಂಬ ಮುಚ್ಚಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ವಾರಂಟ್ ಅನ್ನು ಕೋರ್ಟ್ ಹಿಂತೆಗೆದುಕೊಂಡಿದೆ.

ಈ ಹಿಂದೆ ಡಿಸೆಂಬರ್ ೧೮ ಮತ್ತು ಜನವರಿ ೨೩ ರ ವಿಚಾರಣೆಗೆ ಗೈರುಹಾಜರಾದದ್ದಕ್ಕೆ ಕೋರ್ಟ್ ಸಾಧ್ವಿ ವಿರುದ್ಧ ವಾರಂಟ್ ಹೊರಡಿಸಿತ್ತು.

ಮುಂದಿನ ವಿಚಾರಣೆ ಫೆಬ್ರವರಿ ೨೩ ಕ್ಕೆ ಮುಂದೂಡಲಾಗಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ೨೦೧೩ರಲ್ಲಿ ನಡೆದ ಮುಜಫರ್ ನಗರ ಗಲಭೆಯಲ್ಲಿ ೬೦ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಲ್ಲದೆ, ೪೦ ಸಾವಿರಕ್ಕೂ ಹೆಚ್ಚು ಜನ ಸ್ಥಳಾಂತರವಾಗಿದ್ದರು.

SCROLL FOR NEXT