ಪ್ರಧಾನ ಸುದ್ದಿ

22ರಿಂದ ಕೇಜ್ರಿವಾಲ್ ಗೆ ಬೆಂಗಳೂರಿನಲ್ಲಿ ಪ್ರಕೃತಿಕ ಚಿಕಿತ್ಸೆ

Mainashree

ನವದೆಹಲಿ: ತೀವ್ರ ಕೆಮ್ಮಿನಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜ.22ರಿಂದ 10 ದಿನಗಳ ಕಾಲ ಬೆಂಗಳೂರಿನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ  ಚಿಕಿತ್ಸೆ ಪಡೆಯಲಿದ್ದಾರೆ.

ಕಳೆದ ವರ್ಷದ ಮಾರ್ಚ್ ನಲ್ಲಿಯೂ ಇದೇ ಚಿಕಿತ್ಸೆಯನ್ನು ಪಡೆದಿದ್ದರು. ಇದೇ ವೇಳೆ ದೆಹಲಿಯಲ್ಲಿ 15 ದಿನಗಳ ಕಾಲ ಜಾರಿಯಲ್ಲಿದ್ದ ಬೆಸ-ಸಮ ಪ್ರಾಯೋಗಿಕ ಸಂಚಾರ ನಿಯಮ ಶುಕ್ರವಾರ ಮುಕ್ತಾಯವಾಗಿದೆ. ಈ ಬಗ್ಗೆ ಮಾತನಾಡಿರುವ ಅವರು ಮುಂದಿನ ದಿನಗಳ ಅದನ್ನು ಸುಧಾರಿತ ರೂಪದಲ್ಲಿ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಸಾರಿಗೆ ವ್ಯವಸ್ಥೆ ಬಲಗೊಳಿಸಲು, ದಟ್ಟಣೆ ನಿವಾರಿಸಲು ಇದು ಸಹಕಾರಿಯಾಗಿದೆ. ದಂಡಕ್ಕೆ ಹೆದರಿ ದೆಹಲಿ ಜನ ಈ ನಿಯಮ  ಪಾಲಿಸಲಿಲ್ಲ. ಬದಲಾಗಿ ಸ್ವಯಂ ಪ್ರೇರಿತ ರಾಗಿ ಪಾಲಿಸಿದ್ದಾರೆ, ಎಂದು ಅವರು ಹೇಳಿದ್ದಾರೆ.

SCROLL FOR NEXT