ಸ್ಮಾರ್ಟ್ ಸಿಟಿ(ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಕರ್ನಾಟಕದ ದಾವಣಗೆರೆ-ಬೆಳಗಾವಿಗೆ ಮೊದಲ ಹಂತದ ಸ್ಮಾರ್ಟ್ ಸಿಟಿ ಭಾಗ್ಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ದಾವಣಗೆರೆ, ಬೆಳಗಾವಿ ನಗರಗಳ ಹೆಸರು...

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ದಾವಣಗೆರೆ, ಬೆಳಗಾವಿ ನಗರಗಳ ಹೆಸರು ಘೋಷಣೆಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಗೆ ದೇಶದ 20 ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಮೊದಲ ಹಂತದ ಸ್ಮಾರ್ಟ್ ಸಿಟಿಗಳ ಹೆಸರನ್ನು ಗುರುವಾರ ಪ್ರಕಟಿಸುವುದಾಗಿ ತಿಳಿಸಿದ್ದರು.

ಸ್ಮಾರ್ಟ್‌ಸಿಟಿ ಯೋಜನೆಗೆ ಕರ್ನಾಟಕದ ದಾವಣಗೆರೆ, ಮಂಗಳೂರು, ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರಗಳು ಸೇರಿದಂತೆ ವಿವಿಧ ರಾಜ್ಯಗಳ 97 ನಗರಗಳು ತಮ್ಮ ಪ್ರಸ್ತಾಪಗಳನ್ನು ಸಲ್ಲಿಸಿದ್ದವು. ಈ ಪ್ರಸ್ತಾಪಗಳು ಕುರಿತು ಕೇಂದ್ರ ಸರ್ಕಾರ ರಚಿಸಿದ್ದ ಮೂರು ಸಮಿತಿಗಳು ಅಧ್ಯಯನ ನಡೆಸಿ, ಅತ್ಯುತ್ತಮ ಎನ್ನಿಸಿದ 20 ನಗರಗಳ ಹೆಸರನ್ನು ಅಂತಿಮಗೊಳಿಸಿ ಗುರುವಾರ ನಗರಗಳ ಹೆಸರನ್ನು ಘೋಷಿಸಿದೆ.

ಪಟ್ಟಿಯಲ್ಲಿ ಸ್ಥಾನಪಡೆದ 20 ನಗರಗಳಿಗೆ ಮೊದಲ ವರ್ಷ ಕೇಂದ್ರ ಸರ್ಕಾರ 200 ಕೋಟಿ ರು. ನೆರವು ನೀಡಲಿದ್ದು, ನಂತರದ 3 ವರ್ಷಗಳಲ್ಲಿ ತಲಾ 100 ಕೋಟಿ ರು. ಹಣಕಾಸಿನ ನೆರವನ್ನು ನೀಡಲಿದೆ.

ಮೊದಲ ಕಂತಿನ 20 ಸ್ಮಾರ್ಟ್ ಸಿಟಿಗಳ ಹೆಸರು:
ಭುವನೇಶ್ವರ್, ಪುಣೆ, ಜೈಪುರ್, ಕೊಚ್ಚಿ, ಚೆನ್ನೈ, ಉದಯ್ ಪುರ್, ಅಹ್ಮದ್ ನಗರ್, ಸೊಲ್ಲಾಪುರ್, ಲೂಧಿಯಾನಾ, ಭೋಪಾಲ್, ಇಂದೋರ್,  ನವದೆಹಲಿ, ಗುವಾಹಟಿ,  ಸೂರತ್, ಜಬಲ್ಪುರ್, ಕೊಯಂಬತ್ತೂರ್, ಕಾಕಿನಾಡ, ವಿಶಾಖಪಟ್ಟಣಂ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT