ಪರಮಾಣು ಘಟಕ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತದಲ್ಲಿ ಪರಮಾಣು ಘಟಕ ಕಾಮಗಾರಿ ಆರಂಭ; ಅಮೆರಿಕ ಸ್ಪಷ್ಟನೆ

ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ...

ವಾಷಿಂಗ್ಟನ್: ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ  ಸ್ಪಷ್ಟಪಡಿಸಿದೆ.

ವಿಶ್ವ ಸಮುದಾಯದ ಕಣ್ತಪ್ಪಿಸಿ ಭಾರತ ರಹಸ್ಯವಾಗಿ ಪರಮಾಣು ಘಟಕಗಳನ್ನು ಸ್ಥಾಪಿಸುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಭಾರತದಲ್ಲಿ 6 ಪರಮಾಣು ಘಟಕಗಳ ಕಾಮಗಾರಿ  ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಡೆದಿದ್ದ ನಾಗರೀಕ ಪರಮಾಣು ಒಪ್ಪಂದದ ಅನ್ವಯ ಈ ಘಟಕಗಳು ಸ್ಥಾಪನೆಯಾಗುತ್ತಿದೆ ಎಂದು  ಅಮೆರಿಕ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಅಧ್ಯಕ್ಷ ಬರಾಕ್ ಒಬಾಮರೊಂದಿಗಿನ ದ್ವಿಪಕ್ಷೀಯ ಶೃಂಗಸಭೆಯ ಬಳಿಕ ವೈಟ್ ಹೌಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಅಮೆರಿಕ  ಪಾಲಿಗೆ ಭಾರತ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದು, ನಾಗರೀಕ ಪರಮಾಣು ಒಪ್ಪಂದದ ಅನ್ವಯ ಭಾರತದಲ್ಲಿ 6 ಪರಮಾಣು ಸ್ಥಾವರಗಳ ಪ್ರಾಥಮಿಕ ಕಾಮಗಾರಿ  ಆರಂಭವಾಗಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದೆ.

"ಭಾರತದ ವಿವಿಧ ಪ್ರದೇಶಗಳಲ್ಲಿ ಒಟ್ಟು 6 ಎಪಿ1000 ತಂತ್ರಜ್ಞಾನದ ಪರಮಾಣು ಸ್ಥಾವರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಬಗೆಯ ವಿನ್ಯಾಸದ  ಪರಮಾಣು ಸ್ಥಾವರಗಳಲ್ಲಿ ಅತೀ ದೊಡ್ಡ ಪ್ರಮಾಣದ ಪರಮಾಣು ಸ್ಥಾವರಗಳಾಗಲಿವೆ. ಆ ಮೂಲಕ ಭಾರತದ ಇಂಧನ ಬೇಡಿಕೆಗೆ ಈ ಪರಮಾಣು ಸ್ಥಾವರಗಳು ಪರಿಣಾಮಕಾರಿ  ಪರಿಹಾರವಾಗಲಿದ್ದು, ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಲಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

2005ರ ಜುಲೈ 18ರಂದು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಅಂದಿನ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮುಖದಲ್ಲಿ ಉಭಯ ದೇಶಗಳು 123 ಒಪ್ಪಂದಗಳ  ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT