ಇಟಲಿ ನಾವಿಕರು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಇಟಲಿ ನಾವಿಕ ತವರಿಗೆ ಮರಳಬಹುದು: ಸುಪ್ರೀಂ ಕೋರ್ಟ್

ಮಾನವೀಯ ನೆಲೆಯಲ್ಲಿ ಜಾಮೀನು ಷರತ್ತನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಇಟಲಿ ನಾವಿಕರಿಬ್ಬರ ಪೈಕಿ ಓರ್ವ ನಾವಿಕನಿಗೆ ತನ್ನ ತವರಿಗೆ ಹೊರಡಲು ಗುರುವಾರ ಅನುಮತಿ ನೀಡಿದೆ.

ನವದೆಹಲಿ: 2012ರ ಕೇರಳದ ಮೀನುಗಾರರಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರಿಬ್ಬರ ಪೈಕಿ ಓರ್ವ ನಾವಿಕನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು,  ‘ಮಾನವೀಯ ನೆಲೆಯಲ್ಲಿ ಜಾಮೀನು ಷರತ್ತನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಆತನಿಗೆ ತನ್ನ ತವರಿಗೆ ಹೊರಡಲು ಗುರುವಾರ ಅನುಮತಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಂತಾರಾಷ್ಟ್ರಿಯ ಆರ್ಬಿಟ್ರಲ್ ಟ್ರಿಬ್ಯೂನಲ್ ವ್ಯಾಪ್ತಿ ವಿಚಾರವನ್ನು ನಿರ್ಧರಿಸುವವರೆಗೆ ನಾವಿಕ ಸಾಲ್ವಟೋರ್  ಗಿರೋನ್ ತಾಯ್ನಾಡಿಗೆ ವಾಪಸಾಗಲು ಗುರುವಾರ ಅನುಮತಿ ನೀಡಿತು. ಜಾಮೀನು ಷರತ್ತನ್ನು ಸಡಿಲಗೊಳಿಸಲು ತನ್ನ ಆಕ್ಷೇಪವಿಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ  ತಿಳಿಸಿದ ಬಳಿಕ ಸುಪ್ರೀಂಕೋರ್ಟ್  ಈ ಆದೇಶ ನೀಡಿದ್ದು, ‘ಟ್ರಿಬ್ಯೂನಲ್ ಭಾರತದ ಪರವಾಗಿ ತೀರ್ಪು ನೀಡಿದರೆ ಗಿರೋನ್ ಭಾರತಕ್ಕೆ ವಾಪಸಾಗುವುದಾಗಿ ಇಟಲಿ ರಾಯಭಾರಿ ಹೊಸದಾಗಿ  ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆದೇಶ ನೀಡಿತು.

ಗಿರೋನ್ ಗೆ ಸುಪ್ರೀಂ ಷರತ್ತು
ಇದೇ ವೇಳೆ ನಾವಿಕ ಗಿರೋನ್ ಗೆ ಸುಪ್ರೀಂ ಕೋರ್ಟ್ ತಯ್ನಾನಾಡಿಗೆ ತೆರಳಲು ಅನುಮತಿ ನೀಡಿದೆಯಾದರೂ, ಆತನಿಗೆ ಹಲವು ಷರತ್ತುಗಳನ್ನುವ ವಿಧಿಸಿದೆ. ಭಾರತದಿಂದ ವಾಪಸಾದ ಬಳಿಕ  ಗಿರೋನ್ ತಾವು ಇರುವ ಪ್ರದೇಶದಲ್ಲಿನ ಪೊಲೀಸ್ ಠಾಣೆಗೆ ಪ್ರತಿ ತಿಂಗಳೂ ಹಾಜರಾಗಬೇಕು ಮತ್ತು ಭಾರತದಿಂದ ಹೋದ ಬಳಿಕವೂ ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಪಾಲಿಸಲು  ಒಪ್ಪಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಷರತ್ತು ವಿಧಿಸಿದೆ.

2012ರಲ್ಲಿ ಇಟಲಿಯ ತೈಲ ಟ್ಯಾಂಕರ್ ಕಾವಲು ನಿರತರಾಗಿದ್ದ ನಾವಿಕರಾದ ಸಾಲ್ವಟೋರ್ ಗಿರೋನ್ ಮತ್ತು ಮಸ್ಸಿಮಿಲಿಯಾನೊ ಲಾಟೊರ್ರೆ ತಮ್ಮ ನೌಕೆಯ ಸಮೀಪ ಬಂದ ಕೇರಳದ  ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ತಿಳಿದು ಗುಂಡಿಕ್ಕಿ ಹತ್ಯೆಗೈದಿದ್ದರು. ಬಳಿಕ ಇಬ್ಬರೂ ನಾವಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತೀವ್ರ ಹಗ್ಗ-ಜಗ್ಗಾಟದಿಂದ ಕೂಡಿದ್ದ ಈ  ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಇಟಲಿ ಆಗ್ರಹಿಸಿತ್ತು. ಆದರೆ ಪ್ರಕರಣ ತನ್ನ ದೇಶದಲ್ಲಿ ನಡೆದಿದ್ದು, ಅದೂ ಕೂಡ ತನ್ನ ನಾಗರೀಕರ  ಹತ್ಯೆಯಾಗಿರುವುರಿಂದ ಭಾರತದಲ್ಲೇ ವಿಚಾರಣೆ ನಡೆಸಬೇಕು ಎಂದು ಭಾರತ ವಾದಿಸಿತ್ತು. ಹೀಗಾಗಿ ಪ್ರಕರಣದಲ್ಲಿ ಸುಪ್ರೀಂ ಮಧ್ಯ ಪ್ರವೇಶ ಮಾಡಿತ್ತು. ಈ ಹಿಂದೆ ಪ್ರಕರಣದ ಇನ್ನೊಬ್ಬ ನಾವಿಕ  ಮಸ್ಸಿಮಿಲಿಯಾನೊ ಲಾಟೊರ್ರೆ 2014ರಲ್ಲೇ ಇಟಲಿಗೆ ವಾಪಸಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT