ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಚಳಿಗಾಲಕ್ಕೆ ಸೂರಿಲ್ಲದವರ ಸಹಾಯಕ್ಕೆ 18.81 ಕೋಟಿ ಅನುದಾನ ನೀಡಿದ ಉತ್ತರಪ್ರದೇಶ

ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಲಖನೌ: ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ. 
ಹೊದಿಕೆಗಳನ್ನು ವಿತರಿಸುವ ಮೂಲಕ ಹಾಗು ಚಳಿ ಕಾಯಿಸಿಕೊಳ್ಳಲು ಬಯಲುರಿಯನ್ನು ಹಾಕಲು ನೆರವಾಗಿ ಬಡ, ಸೂರಿಲ್ಲದ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 
ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಈಗಾಗಲೇ ಇದಕ್ಕಾಗಿ ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ಹೇಳಿದ್ದಾರೆ. 
ಕಳೆದ ಚಳಿಗಾಲಗಳಲ್ಲಿ ಎದುರಿಸಿರುವ ತೊದರೆಗಳನ್ನು ಗಮನದಲ್ಲಿರಿಸಿ, ಬಡಜನಕ್ಕಾಗಿ ಹೊದಿಕೆಗಳನ್ನು ಖರೀದಿಸಲು ಪ್ರತಿ ತಾಲ್ಲೂಕಿಗೆ ಐದು ಲಕ್ಷ ರೂ ಅನುದಾನ ನೀಡಲಾಗಿದೆ. 342 ತಾಲ್ಲೂಕುಗಳಲ್ಲಿ ಹೊದಿಕೆಗಳ ವಿತರಣೆಗಾಗಿಯೇ 17.1 ಕೋಟಿ ರೂ ಮೀಸಲಿಡಲಾಗಿದೆ. 
ಹಾಗೆಯೇ ಸಾರ್ವಜನಿಕ ಪ್ರದೇಶಗಳಲ್ಲಿ ಬಯಲುರಿಗಳನ್ನು ಹೊತ್ತಿಸಲು ನೆರವಾಗಲು ಪ್ರತಿ ತಾಲ್ಲೂಕಿಗೆ 50 ಸಾವಿರ ರೂ ನೀಡಲಾಗುತ್ತಿದ್ದು ಇದಕ್ಕಾಗಿ 1.71 ಕೋಟಿ ರು ಅನುದಾನ ಬಿಡುಗಡೆ ಮಾಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT