ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಫೆಬ್ರವರಿ ೬ ರೊಳಗೆ ೬೦೦ ಕೋಟಿ ಜಮಾ ಮಾಡಿ ಇಲ್ಲವೇ ಶರಣಾಗತರಾಗಿ: ಸುಬ್ರತೊ ರಾಯ್ ಗೆ ಸುಪ್ರೀಂ

ಜೈಲಿನಿನಿಂದ ಜಾಮೀನಿನ ಮೇಲೆ ಹೊರಗಿರಬೇಕಾದರೆ ಸೆಬಿ-ಸಹರಾ ಹಿಂಪಡೆತ ಖಾತೆಯಲ್ಲಿ ಫೆಬ್ರವರಿ ೬ರೊಳಗೆ ೬೦೦ ಕೋಟಿ ರೂ ಜಮಾ ಮಾಡಿ ತಪ್ಪಿದರೆ ಜೈಲಿಗೆ ಹಿಂದಿರುಗಲು

ನವದೆಹಲಿ: ಜೈಲಿನಿನಿಂದ ಜಾಮೀನಿನ ಮೇಲೆ ಹೊರಗಿರಬೇಕಾದರೆ ಸೆಬಿ-ಸಹರಾ ಹಿಂಪಡೆತ ಖಾತೆಯಲ್ಲಿ ಫೆಬ್ರವರಿ ೬ರೊಳಗೆ ೬೦೦ ಕೋಟಿ ರೂ ಜಮಾ ಮಾಡಿ ತಪ್ಪಿದರೆ ಜೈಲಿಗೆ ಹಿಂದಿರುಗಲು ಸಿದ್ಧರಾಗಿ ಎಂದು ಸಹರಾ ಉದ್ದಿಮೆ ಸಮೂಹದ ಅಧ್ಯಕ್ಷ ಸುಬ್ರತಾ ರಾಯ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಎಚ್ಚರಿಸಿದೆ. 
ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್, ನ್ಯಾಯಾಧೀಶ ರಂಜನ್ ಗೊಗೋಯ್ ಮತ್ತು ಎ ಕೆ ಸಿಕ್ರಿ ಇವರುಗಳನ್ನು ಒಳಗೊಂಡ ನ್ಯಾಯಪೀಠ, ಸಹರಾ ಸಮೂಹದ ಆಸ್ತಿಯನ್ನು ಮಾರಿ ಹೂಡಿಕೆದಾರರಿಗೆ ಅವರ ಹಣ ಹಿಂದಿರುಗಿಸದೆ ಹೋದರೆ ಅದಕ್ಕಾಗಿ ನಾವು ಒಬ್ಬರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಕೂಡ ಹೇಳಿದೆ.
"ನಿಮಗೆ (ಸಹರಾ ಸಮೂಹ) ನಿಮ್ಮ ಆಸ್ತಿಯನ್ನು ಮಾರಲು ಸಾಧ್ಯವಾಗದೆ ಹೋದರೆ, ಅದಕ್ಕಾಗಿ ಒಬ್ಬ ಸ್ವೀಕೃತದಾರನನ್ನು ನಾವು ನೇಮಿಸುತ್ತೇವೆ" ಎಂದು ನ್ಯಾಯಪೀಠ ಹೇಳಿದೆ. 
ಇದಕ್ಕೂ ಮೊದಲು ರಾಯ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸೆಬಿ ಖಾತೆಯಲ್ಲಿ ೨ ತಿಂಗಳೊಳಗೆ ೧೦೦೦ ಕೋಟಿ ಜಮಾ ಮಾಡುವಂತೆ ತಿಳಿಸಿತ್ತು, ಆದರೆ ನಂತರ ಫೆಬ್ರವರಿ ೬, ೨೦೧೭ ರೊಳಗೆ ೬೦೦ ಕೋಟಿ ಜಮಾ ಮಾಡುವಂತೆ ಸೂಚಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?