ಪ್ರಧಾನ ಸುದ್ದಿ

ಸೆಲ್ಫಿಯಿಂದ ಮತ್ತೊಂದು ಪ್ರಾಣಕ್ಕೆ ಕುತ್ತು; ಒರಿಸ್ಸಾದಲ್ಲಿ ಟೆಕ್ಕಿ ನದಿಯಲ್ಲಿ ಮುಳುಗಿ ಮೃತ

Guruprasad Narayana
ಪಾರ್ಲಖೆಮುಂಡಿ (ಒರಿಸ್ಸಾ): 25 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಒರಿಸ್ಸಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ. ಅವರು ನದಿಗೆ ಬಿದ್ದು ಮುಳುಗಿ ಮೃತರಾಗಿದ್ದಾರೆ. 
ಮೃತಪಟ್ಟ ಟೆಕ್ಕಿ ಪಾರ್ಲಖೆಮುಂಡಿಯ ಕಾಮಾಕ್ಯ ನಗರದ ನಿವಾಸಿ ಆರ್ ಪಟ್ನಾಯಕ್ ಎಂದು ಗುರುತಿಸಲಾಗಿದೆ. ಮಹೇಂದ್ರತನಯ ನದಿಯ ಬಳಿ ಮರವೇರಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ, ಆಯತಪ್ಪಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಾರ್ಲಖೆಮುಂಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಬುಲಿ ನಾಯಕ್ ಹೇಳಿದ್ದಾರೆ. 
ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಟ್ನಾಯಕ್ ದೇಹವನ್ನು ನಂತರ ಅಗ್ನಿಶಾಮಕ ದಳ, ಆತ ಬಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ ಪತ್ತೆ ಹಚ್ಚಿದೆ ಎಂದು ಕೂಡ ಅವರು ಹೇಳಿದ್ದಾರೆ. 
SCROLL FOR NEXT