ಐ ಐ ಎಸ್ ಸಿ ಬೆಂಗಳೂರು 
ಪ್ರಧಾನ ಸುದ್ದಿ

ಐ ಐ ಎಸ್ ಸಿ ಬೆಂಗಳೂರು ಭಾರತದ ನಂ1 ವಿಶ್ವವಿದ್ಯಾಲಯ; ಜಾಗತಿಕ ರ್ಯಾಂಕಿಂಗ್ ಕುಸಿತ

ದೇಶದ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು ಸ್ಥಾನ ಕಾಯ್ದುಕೊಂಡಿದ್ದರು, ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಹಿಂದಕ್ಕೆ ಹೋಗಿದೆ.

ಲಂಡನ್: ದೇಶದ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು ಸ್ಥಾನ ಕಾಯ್ದುಕೊಂಡಿದ್ದರು, ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಹಿಂದಕ್ಕೆ ಹೋಗಿದೆ. 
ಜೆಮ್ ಶೆಡ್ ಜಿ ಟಾಟಾ, ಮೈಸೂರು ಮಹಾರಾಜ ಮತ್ತು ಭಾರತೀಯ ಸರ್ಕಾರದ ಜಂಟಿ ಸಹಯೋಗದೊಂದಿದೆ 1909 ರಲ್ಲಿ ನಿರ್ಮಾಣವಾದ ಐ ಐ ಎಸ್ ಸಿ ಜಾಗತಿಕ ರ್ಯಾಂಕಿಂಗ್ ಪತಿಯಲ್ಲಿ ಕಳೆದ ವರ್ಷ 147 ನೇ ಸ್ಥಾನದಲ್ಲಿದ್ದರೆ ಈ ವರ್ಷ 152 ನೇ ಸ್ಥಾನಕ್ಕೆ ಕುಸಿದಿದೆ. 
400 ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಇತರ ಸಂಸ್ಥಗಳೆಂದರೆ ಐಐಟಿ ದೆಹಲಿ (185), ಐಐಟಿ ಬಾಂಬೆ (219), ಐಐಟಿ ಮದ್ರಾಸ್ (249), ಐಐಟಿ ಕಾನ್ಪುರ್ (302), ಐಐಟಿ ಖರಗ್ಪುರ್ (313) ಮತ್ತು ಐಐಟಿ ರೂರ್ಕೆ (399).
"ಈ ವರ್ಷದ ರ್ಯಾಂಕಿಂಗ್ ಪಟ್ಟಿ ಸೂಚಿಸುವುದೇನೆಂದರೆ, ವಿಶ್ವವಿದ್ಯಾಲಯಗಳಲ್ಲಿ ಹೂಡಿಕೆ ಯಾವ ವಿಶ್ವವಿದ್ಯಾಲಯ ಮೇಲೇರುತ್ತದೆ ಅಥವಾ ಕುಸಿಯುತ್ತದೆ" ಎಂದು ತಿಳಿಸುತ್ತದೆ ಎಂದು ಈ ಸಮೀಕ್ಷೆಯ ಉಸ್ತುವಾರಿ ಬೆನ್ ಸೊವ್ಟರ್ ಹೇಳಿದ್ದಾರೆ. 
ವಿಶ್ವ ರ್ಯಾಂಕಿಂಗ್ ಪಟ್ಟಿಯ ಮೊದಲ ಹತ್ತು ಸ್ಥಾನಗಳು ಹೀಗಿವೆ. 
1. ಮೆಸಾಚುಸ್ಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
2. ಸ್ಟಾನ್ಫರ್ಡ್ ವಿಶ್ವವಿದ್ಯಾಲಯ
3. ಹಾರ್ವಾರ್ಡ್ ವಿಶ್ವವಿದ್ಯಾಲಯ
4. ಕೇಂಬ್ರಿಜ್ ವಿಶ್ವವಿದ್ಯಾಲಯ
5. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
6. ಆಕ್ಸ್ಫರ್ಡ್ ವಿಶ್ವವಿದ್ಯಾಲಯ
7. ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ 
8. ಇ ಟಿ ಎಚ್ ಜ್ಯುರಿಕ್ 
9. ಇಂಪೀರಿಯಲ್ ಕಾಲೇಜ್ ಲಂಡನ್ 
10. ಶಿಕಾಗೋ ವಿಶ್ವವಿದ್ಯಾಲಯ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮ: ವಿಪಕ್ಷಗಳ ಪ್ರತಿಭಟನೆ ನಡುವೆಯೇ UCC ಮಸೂದೆ ಅಂಗೀಕಾರ! ಬಹು ಪತ್ನಿತ್ವಕ್ಕೆ ಜೈಲು ಶಿಕ್ಷೆ

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ; ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ

SCROLL FOR NEXT