ಗಡಿ ನಿಯಂತ್ರಣ ರೇಖೆ 
ಪ್ರಧಾನ ಸುದ್ದಿ

ಬಾಹ್ಯ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ: ಪಾಕಿಸ್ತಾನ ವಾಯುಪಡೆ

ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ ಎಚ್ಚರದಿಂದಿದ್ದೇವೆ

ಇಸ್ಲಮಾಬಾದ್: ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ ಎಚ್ಚರದಿಂದಿದ್ದೇವೆ ಮತ್ತು ಯಾವುದೇ ಬಾಹ್ಯ ದಾಳಿಗೆ ಉತ್ತರಿಸುತ್ತೇವೆ ಎಂದು ಪಾಕಿಸ್ತಾನ ವಾಯುಪಡೆ ಹೇಳಿದೆ. 
ಗುರುವಾರ ಬೆಳಗ್ಗೆ ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನ ದೂರಿರುವ ಹಿನ್ನಲೆಯಲ್ಲಿ ವಾಯುಪಡೆ ಈ ಹೇಳಿಕೆ ನೀಡಿದೆ. 
ಭಾರತ ನಡೆಸಿದೆ ಎಂದು ಹೇಳಿಕೊಳ್ಳಲಾಗುತ್ತಿರುವ 'ಚಿಕಿತ್ಸಕ ದಾಳಿ' ಸುಳ್ಳಿನ ಕಂತೆ ಎಂದು ಕೂಡ ಪಾಕಿಸ್ತಾನ ವಾಯುಪಡೆ ವಕ್ತಾರ ಹೇಳಿದ್ದಾರೆ. 
ಯಾವುದೇ ಸಮಯದಲ್ಲಿ ಪಾಕಿಸ್ತಾನದ ವಾಯು ಗಡಿಯನ್ನು ನಮ್ಮ ವಾಯುಪಡೆ ಕಾಯಲಿದೆ ಎಂದು ಅವರು ಹೇಳಿದ್ದಾರೆ. 
ಗುರುವಾರ ಬೆಳಗ್ಗೆ ಗಡಿನಿಯಂತ್ರಣಾ ರೇಖೆಯಲ್ಲಿ ಉಗ್ರರ ಅಡುಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದ್ದಾಗಿ ಭಾರತೀಯ ಸೇನೆ ತಿಳಿಸಿತ್ತು. ಹಾಗೆಯೇ ಪಾಕಿಸ್ತಾನ ಕದನವಿರಾಮ ಉಲಂಘಿಸಿ ಗುಂಡಿನ ಪ್ರಚೋದನೆ ನೀಡಿದೆ ಎಂದು ಕೂಡ ಭಾರತೀಯ ಸೇನೆ ಆರೋಪಿಸಿತ್ತು. 
ಈ ಆರೋಪ ಪ್ರತ್ಯಾರೋಪಗಳಿಂದಾಗಿ ಅಣು ಶಸ್ತ್ರಾಸ್ತ್ರ ಸಜ್ಜಿತ ದೇಶಗಳ ನಡುವೆ ಉದ್ವಿಘ್ನ ವಾತಾವರಣ ಏರ್ಪಟ್ಟಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT