ಆರ್ ಎಸ್ ಎಸ್ ಪಥ ಸಂಚಲನ 
ಪ್ರಧಾನ ಸುದ್ದಿ

ಘರ್ ವಾಪ್ಸಿ: ಹಿಂದೂ ಧರ್ಮಕ್ಕೆ ಮರಳಿದ 53 ಕುಟುಂಬಗಳು

ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ ಶಿಬಿರದಿಂದಾಗಿ ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ...

ಖುಂಟಿ: ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ  ಶಿಬಿರದಿಂದಾಗಿ  ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ. 
ಕ್ರೈಸ್ತ ಮಿಷನರಿಗಳಡೆಗೆ ಆಕರ್ಷಿತರಾಗಿ ಬುಡಕಟ್ಟು ಜನಾಂಗದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಖುಂಟಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ್ ಸಿಂಗ್ ಮುಂಡಾ ಹೇಳಿದ್ದಾರೆ.
ಇದು ಮತಾಂತರವಲ್ಲಿ, ಅವರು ವಾಪಸ್ ತಮ್ಮ ಧರ್ಮಕ್ಕೆ ಮರಳಿದ್ದಾರೆ ಎಂದು ಆರ್ ಎಸ್ ಎಸ್ ಸ್ಪಷ್ಟನೆ ನೀಡಿದೆ. ನಮಗೆ ಕ್ರಿಶ್ಚಿಯಾನಿಟಿ ಮುಕ್ತ ಪ್ರದೇಶ ಬೇಕು. ಗ್ರಾಮಸ್ಥರು ತಮ್ಮ ಮೂಲಕ್ಕೆ ಶೀಘ್ರವೇ ವಾಪಸಾಗುತ್ತಾರೆ ಎಂದು ಆರ್ ಎಸ್ ಎಸ್ ಸಂಯೋಜಕ ಲಕ್ಷ್ಮಣ್ ಸಿಂಗ್ ಮುಂಡಾ ತಿಳಿಸಿದ್ದಾರೆ. 
ಕಳೆದ ಕೆಲ ವರ್ಷಗಳಿಂದ ಜಾರ್ಖಂಡ್ ನ ಹಲವು ಬುಡಕಟ್ಟು ಜನಾಂಗಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ, ಬಲವಂತವಾಗಿ  ಮತಾಂತರ ಮಾಡುವವರ ವಿರುದ್ಧ , ಜಾರ್ಖಂಡ್ ಸಿಎಂ ರಘುಬರ್ ದಾಸ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT