ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಪಾಕ್ ಪ್ರಧಾನಿ ನವಾಜ್ ಷರೀಫ್, ಸಜ್ಜನ್ ಜಿಂದಾಲ್ ರಹಸ್ಯ ಮಾತುಕತೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಉಕ್ಕು ಕ್ಷೇತ್ರದ ಉದ್ಯಮಿ ಸಜ್ಜನ್ ಜಿಂದಾಲ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದು,...

ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಉಕ್ಕು ಕ್ಷೇತ್ರದ ಉದ್ಯಮಿ ಸಜ್ಜನ್ ಜಿಂದಾಲ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದು, ಸತತ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರದ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಉದ್ಯಮಿಸಜ್ಜನ್ ಜಿಂದಾಲ್ ಅವರು ಪಾಕಿಸ್ತಾನದ ಕಾಬೂಲ್ ಗೆ ವಿಶೇಷ ವಿಮಾನದಲ್ಲಿ ತೆರಳಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ರಾಜಧಾನಿ ಇಸ್ಲಾಮಾಬಾದ್ ಗೆ ತೆರಳಿದ್ದಾರೆ. ಇಸ್ಲಾಮಾಬಾದ್ ನ ನವಾಜ್ ಷರೀಫ್ ನಿವಾಸದಲ್ಲಿ ಸಜ್ಜನ್ ಜಿಂದಾಲ್ ಮಹತ್ವದ ಚರ್ಚೆ ನಡೆಸಿದ್ದು, ಚರ್ಚೆಯ ಅಂಶಗಳೇನೂ ಎಂಬುದು ತಿಳಿದುಬಂದಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಸಜ್ಜನ್ ಜಿಂದಾಲ್ ಅವರೊಂದಿಗೆ ಇರುವ ಮತ್ತಿಬ್ಬರು ಸದಸ್ಯರನ್ನು ಸುಖೇತ್ ಸಿಂಗ್ ಮತ್ತು ವಿರೇಂದರ್ ಬಾಬರ್ ಸಿಂಗ್ ಎಂದು ಹೇಳಲಾಗಿದ್ದು, ಈ ಇಬ್ಬರು ಯಾರು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದೂ ವರದಿಯಲ್ಲಿ  ತಿಳಿಸಲಾಗಿದೆ. ಅಂತೆಯೇ ಮಾಧ್ಯಮಗಳ ವರದಿಯಲ್ಲಿ ಈ ತಂಡ ಪ್ರಸ್ತುತ ಪಾಕಿಸ್ತಾನದ ವಶದಲ್ಲಿರುವ ಭಾರತದ ಮಾಜಿ ನೌಕಾದಳ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಬಿಡುಗಡೆಗಾಗಿಯೇ ಸಂಧಾನ ಮಾತುಕತೆ ನಡೆಸಲು ಬಂದಿದ್ದಾರೆ ಎಂದು ಮಾಧ್ಯಮಗಳು ಶಂಕಿಸಿವೆ. ಈ ಹಿಂದೆಯೂ ಕೂಡ ಸಜ್ಜನ್ ಜಿಂದಾಲ್ ನವಾಜ್ ಷರೀಫ್ ಅವರ ಮಗಳ ಮದುವೆಗೆ ಮುಖ್ಯ ಅತಿಥಿಯಾಗಿದ್ದರು. ಕಳೆದ ವರ್ಷ ಡಿಸೆಂಬರ್ 25ರಂದು ನವಾಜ್ ಷರೀಫ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಭೇಟಿಗೂ ಸಜ್ಜನ್ ಜಿಂದಾಲ್ ಅವರೇ ಕಾರಣ ಎಂದೂ ಮಾಧ್ಯಮಗಳು ವರದಿಯಲ್ಲಿ ಹೇಳಿವೆ.

ಆದರೆ ಮಾಧ್ಯಮಗಳ ಊಹಾಪೋಹಗಳನ್ನು ನವಾಜ್ ಷರೀಫ್ ಕಚೇರಿ ತಳ್ಳಿಹಾಕಿದ್ದು, ನವಾಜ್ ಷರೀಫ್ ಅವರು ಸಜ್ಜನ್ ಜಿಂದಾಲ್ ಅವರೊಂದಿಗೆ ವಾಣಿಜ್ಯ ವ್ಯವಹಾರ ಹೊಂದಿದ್ದು, ಈ ಬಗ್ಗೆ ಚರ್ಚಿಸುವ ಸಲುವಾಗಿ ಅವರು ಭೇಟಿಯಾಗಿದ್ದರು. ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದು ರಾಜತಾಂತ್ರಿಕ ಭೇಟಿಯಲ್ಲ, ಕೇವಲ ವಾಣಿಜ್ಯ ಉದ್ದೇಶದ ಭೇಟಿಯಾಗಿತ್ತು ಎಂದು ನವಾಜ್ ಷರೀಫ್ ಅವರ ವಕ್ತಾರರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಪ್ರಧಾನಿ ಸ್ಪಷ್ಟನೆ ಕೇಳಿದ ವಿಪಕ್ಷಗಳು
ಇನ್ನು ಸಜ್ಜನ್ ಜಿಂದಾಲ್ ಮತ್ತು ಪ್ರಧಾನಿ ನವಾಜ್ ಷರೀಫ್ ಅವರ ಭೇಟಿ ಕುರಿತಂತೆ ಶಂಕೆ ವ್ಯಕ್ತಪಡಿಸಿರುವ ವಿಪಕ್ಷಗಳು ಈ ಬಗ್ಗೆ ಕೂಡಲೇ ಪ್ರಧಾನಿ ನವಾಜ್ ಷರೀಫ್ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ನಾಯಕ ಇಮ್ರಾನ್ ಖಾನ್ ಅವರು ನವಾಜ್ ಷರೀಫ್ ಅವರ ನಡೆ ಶಂಕೆ ಮೂಡಿಸುವಂತಿದೆ. ಹೀಗಾಗಿ ಅವರು ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT