ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಶಶಿಕಲಾ ನೀಡಿರುವ ಬೆಂಬಲಿಗರ ಪಟ್ಟಿಯ ಸಹಿಗಳನ್ನು ಪರೀಕ್ಷೆ ನಡೆಸಬೇಕು ಎಂದ ರಾಜ್ಯಪಾಲರು

ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಮತ್ತು ಅವರ ಬೆಂಬಲಿಗರು ಸಲ್ಲಿಕೆ ಮಾಡಿರುವ ಬೆಂಬಲಿತ ಶಾಸಕರ ಪಟ್ಟಿಯಲ್ಲಿನ ಸಹಿಗಳನ್ನು ಪರೀಕ್ಷೆ ನಡೆಸುವದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ: ತಮಿಳುನಾಡಿನಲ್ಲಿ ಎದುರಾಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದ್ದು, ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಮತ್ತು ಅವರ ಬೆಂಬಲಿಗರು ಸಲ್ಲಿಕೆ  ಮಾಡಿರುವ ಬೆಂಬಲಿತ ಶಾಸಕರ ಪಟ್ಟಿಯಲ್ಲಿನ ಸಹಿಗಳನ್ನು ಪರೀಕ್ಷೆ ನಡೆಸುವದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಬಣ ಪ್ರತ್ಯೇಕವಾಗಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿ ತಮ್ಮ ತಮ್ಮ ಬೆಂಬಲಿತ ಶಾಸಕರ ಪಟ್ಟಿ ನೀಡಿ ಬಹುಮತ ಇದೆ ಎಂದು ಪ್ರತಿಪಾದಿಸಿಕೊಂಡಿದ್ದರು. ಹೀಗಾಗಿ  ಇಂದು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಉಭಯ ನಾಯಕರ ಪಟ್ಟಿಗಳನ್ನು ಪರಿಶೀಲಿಸಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದಾರೆ.

ಇನ್ನು ನಿನ್ನೆ ಸಂಜೆ ಸುಮಾರು 5 ಗಂಟೆ ವೇಳೆಗೆ ತಮಿಳುನಾಡು ರಾಜಭವನ ತಲುಪಿದ್ದ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದರು. ಈ ವೇಳೆ ತಮ್ಮ ಬೆಂಬಲಿತ ಶಾಸಕರ  ಪಟ್ಟಿಯನ್ನು ನೀಡಿದ ಅವರು ಈ ಹಿಂದೆ ತಾವು ಸಲ್ಲಿಕೆ ಮಾಡಿದ್ದ ರಾಜಿನಾಮೆಯನ್ನು ಹಿಂಪಡೆಯುವ ಕುರಿತೂ ಚರ್ಚೆ ನಡೆಸಿದ್ದರು. ಇದಲ್ಲದೆ ಶಶಿಕಲಾ ಅವರು ಬಲವಂತವಾಗಿ ಶಾಸಕರು ಮತ್ತು ಸಚಿವರಿಂದ ಖಾಲಿ ಹಾಳೆಗೆ ಸಹಿ  ಮಾಡಿಸಿಕೊಂಡಿದ್ದರು. ಹೀಗಾಗಿ ಅವರ ಶಾಸಕರ ಮತ್ತು ಸಚಿವರ ಸಹಿಗಳು ದುರುಪಯೋಗವಾಗುವ ಸಾಧ್ಯತೆ ಎಂದೂ ಮತ್ತು ಅವರ ಸಹಿಗಳು ನಕಲು ಮಾಡುವ ಸಾಧ್ಯತೆ ಇದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು  ತಿಳಿದುಬಂದಿದೆ. ಬಳಿಕ ಸಂಜೆ ಸುಮಾರು 7 ಗಂಟೆ ಹೊತ್ತಿಗೆ ರಾಜಭವನಕ್ಕೆ ಆಗಮಿಸಿದ ಶಶಿಕಲಾ ಅವರು ತಮ್ಮ ಬೆಂಬಲಿತ ಶಾಸಕರ ಪಟ್ಟಿಯನ್ನು ನೀಡಿ ತಮಗೇ ಬಹಮತವಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ.

ಐದು ದಿನದೊಳಗೆ ಬಹುಮತ ಸಾಬೀತು ಪಡಿಸುವಂತೆ ಪನ್ನೀರ್ ಸೆಲ್ವಂ ಗೆ ರಾಜ್ಯಪಾಲರ ಸೂಚನೆ, ವಿರೋಧ ವ್ಯಕ್ತಪಡಿಸಿದ ಶಶಿಕಲಾ
ಇದೇ ವೇಳೆ ರಾಜಭವನದ ಮೂಲಗಳು ತಿಳಿಸಿರುವಂತೆ ಮುಂದಿನ ಐದು ದಿನಗಳೊಳಗೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ತಮ್ಮ ಬಹುಮತ ಸಾಬೀತು ಪಡಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದರು. ಆದರೆ ಇದಕ್ಕೆ  ವಿಕೆ ಶಶಿಕಲಾ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಬಳಿ ಎಲ್ಲ 134 ಶಾಸಕರ ಸಹಿ ಸಹಿತ ಇರುವ ಬೆಂಬಲ ಪತ್ರವಿದೆ. ಹೀಗಾಗಿ ಸರ್ಕಾರ ರಚನೆಗೆ ತಮಗೇ ಅವಕಾಶ ನೀಡಬೇಕು, ವಿಳಂಬವಾದರೆ ಕುದುರೆ ವ್ಯಾಪಾರಾಗುವ ಸಾಧ್ಯತೆ  ಇದ್ದು, ಈಗಾಗಲೇ ಐದು ಮಂದಿ ಶಾಸಕರು ಪನ್ನೀರ್ ಸೆಲ್ವಂ ಬಣ ಸೇರಿದ್ದಾರೆ ಎಂದು ಶಶಿಕಲಾ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಹಿ ಪರೀಕ್ಷೆಗೆ ಸ್ಪೀಕರ್ ಗೆ ಸೂಚನೆ
ಇನ್ನು ಶಶಿಕಲಾ ಅವರು ಸಲ್ಲಿಕೆ ಮಾಡಿರುವ ಬೆಂಬಲಿಗ ಶಾಸಕರ ಸಹಿ ಪರೀಕ್ಷೆ ನಡೆಸುವಂತೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ತಮಿಳುನಾಡು ಸ್ಪೀಕರ್ ಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

ಸರ್ಕಾರದ ವಿರುದ್ಧ ಹೋರಾಡಿ ಗೆದ್ದ ಅಲೋಕ್ ಕುಮಾರ್​​ಗೆ DGP ಆಗಿ ಮುಂಬಡ್ತಿ: ADGP ಬಿ.ದಯಾನಂದ್ ವರ್ಗಾವಣೆ

Protection of personality rights: ಹೈಕೋರ್ಟ್ ಗೆ ಸಲ್ಮಾನ್ ಖಾನ್; ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಟ್ರೆಂಡ್ ಆಗ್ತಿರೋದೇಕೆ?

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

ತಾಂತ್ರಿಕ ಕಾರಣಗಳಿಂದ SIR ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ: ಅಮಿತ್ ಶಾ

SCROLL FOR NEXT