ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

೪೦% ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಕಳುಹಿಸಿ: ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚನೆ

ಗ್ರಾಮೀಣ ಭಾಗಗಳಿಗೆ ನೋಟುಗಳ ಸರಬರಾಜು ಸಮರ್ಪಕವಾಗಿಲ್ಲ ಎಂದು ಗುರುವಾರ ಹೇಳಿರುವ ಆರ್ ಬಿ ಐ, ಕನಿಷ್ಠ ೪೦% ನೋಟುಗಳನ್ನು ಗ್ರಾಮೀಣ ಭಾಗದ ಬ್ಯಾಂಕ್ ಘಟಕಗಳಿಗೆ ಕಳುಹಿಸುವಂತೆ

ಮುಂಬೈ: ಗ್ರಾಮೀಣ ಭಾಗಗಳಿಗೆ ನೋಟುಗಳ ಸರಬರಾಜು ಸಮರ್ಪಕವಾಗಿಲ್ಲ ಎಂದು ಗುರುವಾರ ಹೇಳಿರುವ ಆರ್ ಬಿ ಐ, ಕನಿಷ್ಠ ೪೦% ನೋಟುಗಳನ್ನು ಗ್ರಾಮೀಣ ಭಾಗದ ಬ್ಯಾಂಕ್ ಘಟಕಗಳಿಗೆ ಕಳುಹಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ. 
"ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿರುವ ಬ್ಯಾಂಕ್ ನೋಟುಗಳು, ಅಲ್ಲಿನ ಜನಸಂಖ್ಯೆಗೆ ಬೇಡಿಕೆಯಿರುವಷ್ಟು ಸಮರ್ಪಕವಾಗಿಲ್ಲ" ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. 
ಗ್ರಾಮೀಣ ಪ್ರದೇಶಗಳಿಗೆ ಕನಿಷ್ಠ ೪೦% ನೋಟುಗಳು ತಲುಪುವಂತೆ ನೋಡಿಕೊಳ್ಳಲು, ಈ ಪ್ರದೇಶಗಳಲ್ಲಿ ಮುಖ್ಯ ಮಾರ್ಗಗಳ ಮೂಲಕ ನೋಟುಗಳ ವಿತರಣೆ ಹೆಚ್ಚಿಸಲು ಬ್ಯಾಂಗ್ ಗಳಿಗೆ ಸೂಚಿಸಲಾಗಿದೆ ಎಂದು ಆರ್ ಬಿ ಐ ಹೇಳಿದೆ. 
"ಗ್ರಾಮೀಣ ಭಾಗಗಳಿಗೆ ಮುಖ್ಯವಾಗಿ ವಿತರಣೆ ಮಾಡಬಲ್ಲ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ ಆರ್ ಬಿ) ಘಟಕಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳು (ಡಿಸಿಸಿಬಿ), ವಾಣಿಜ್ಯ ಬ್ಯಾಂಕ್ ಗಳು, ಎ ಟಿ ಎಂ ಗಳು ಮತ್ತು ಅಂಚೆ ಕಚೇರಿಗಳಿಗೆ ಆದ್ಯತೆಯ ಮೇರೆಗೆ ಹೊಸ ನೋಟುಗಳನ್ನು ಬ್ಯಾಂಗ್ ಗಳು ವಿತರಿಸಬೇಕು" ಎಂದು ಆರ್ ಬಿ ಐ ಹೇಳಿದೆ. 
ಈಗ ಲಭ್ಯವಿರುವ ೧೦೦ ರೂ ಮತ್ತು ಅದಕ್ಕೂ ಕಡಿಮೆ ಮೌಲ್ಯದ ನೋಟುಗಳನ್ನು ಯಥೇಚ್ಛವಾಗಿ ಮತ್ತು ನೂತನ ೫೦೦ ರೂ ನೋಟುಗಳನ್ನು ಗ್ರಾಮೀಣ ಭಾಗದ ಘಟಕಗಳಿಗೆ ವಿತರಿಸುವಂತೆ ಆರ್ ಬಿ ಐ ಸೂಚಿಸಿದೆ. 
ಹಾಗೆಯೇ ನಾಣ್ಯಗಳ ಅಗತ್ಯವಿದ್ದರೆ ಆದ್ಯತೆ ಮೇರೆಗೆ ಕೇಂದ್ರ ಬ್ಯಾಂಕ್ ನಿಂದ ಪಡೆಯುವಂತೆ ಕೂಡ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT