ಬಾದಾಮಿ ಗುಹಾಲಯ 
ಪ್ರವಾಸ-ವಾಹನ

ಭವ್ಯ ಬಾದಾಮಿ

ಇತಿಹಾಸ ಪ್ರಸಿದ್ಧ ಬಾದಾಮಿಗೆ ಬಂದವರು ಅಲ್ಲಿನ ಕಲಾ ಚೆಲುವ ನೋಡಿ ಮರುಳಾಗದೆ...

ಇತಿಹಾಸ ಪ್ರಸಿದ್ಧ ಬಾದಾಮಿಗೆ ಬಂದವರು ಅಲ್ಲಿನ ಕಲಾ ಚೆಲುವ ನೋಡಿ ಮರುಳಾಗದೆ ಇರಲಾರರು. ಎತ್ತರದ ಬೆಟ್ಟದೊಳಗೆ ಕೊರೆದು ನಿರ್ಮಿಸಿದ ಇಲ್ಲಿನ ಗುಹೆಗಳು ಅತ್ಯುತ್ತಮ ತಾಂತ್ರಿಕ ಜ್ಞಾನದ ಪ್ರತೀಕಗಳಾಗಿದ್ದು ವಿಶ್ವದ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಗುಹಾಲಯಗಳಷ್ಟೇ ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಕೆತ್ತನೆ ಇರದ, ಸ್ವಾಭಾವಿಕವಾಗಿಯೇ ಸುಂದರವಾಗಿ ಕಾಣುವ ಭವ್ಯ ಬಂಡೆಗಳು. ನೋಡಲು ಜಡವಸ್ತುಗಳಾದರೂ ಇವು ಚೈತನ್ಯದಾಯಕ.

ಬೇರೆ ಬೇರೆ ಕೋನದಿಂದ ಕಣ್ಣುಹಾಯಿಸಿದರೆ ಭಿನ್ನ. ವಿಸ್ಮಯವಾಗಿ ಕಾಣುವ ಈ ಬಂಡೆಗಳು ಹತ್ತಿರ ಬಂದು ನೋಡಿದವರಿಗೆ ಭೀತಿ ತರಿಸುತ್ತವೆ. ಅದೆಷ್ಟೋ ವರ್ಷಗಳಿಂದ ನಿಸರ್ಗದ ಪ್ರಕೋಪಗಳನ್ನು ಎದುರಿಸಿದ್ದರೂ ಒಂದಿಂಚೂ ಅಲುಗಾಡದೆ ನೆಟ್ಟಗೆ ನಿಂತಿವೆ. ಶಾಶ್ವತ ನಿಲುವಿನಿಂದ ಸರ್ವಕಾಲಕ್ಕೂ ಸುಂದರವಾಗಿ ಕಾಣುತ್ತಿವೆ.

ಎಷ್ಟೋ ರಾಜರು ಸೈನಿಕರ ನೆರವಿನಿಂದ ಕೋಟೆ ಕಟ್ಟಿಸಿದರೆ ಬಾದಾಮಿಗೆ ನಿಸರ್ಗವೇ ಕೋಟೆ ಕಟ್ಟಿದೆ. ಚಾಲುಕ್ಯರು ಈ ಸ್ಥಳವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿನ ಬಂಗಾರ ಬಣ್ಣದ ಬಿಸಿಲಿಗೆ ರಂಗಾಗಿ ಕಾಣುಕವ ದೃಶ್ಯ ಅದ್ಭುತ. ಈ ಬಂಡೆಗಳನ್ನೇರುವುದಂತೂ ಕಷ್ಟದಾಯಕ. ಅಲ್ಲಲ್ಲಿರುವ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನೇರುತ್ತ ಮೇಲೆಕ್ಕ ಹೋದರೆ ವಿಶಾಲ ದಿಗಂತ, ಇಡೀ ಊರಿನ ಅಂದದ ದೃಶ್ಯ ನೋಡಿ ಆನಂದಿಸಬಹುದು.

ಬಾದಾಮಿಯ ನಿಗೂಢ ಸೌಂದರ್ಯ ನೋಡಲು ಅವಶ್ಯ ಬನ್ನಿ.

-ಎ.ಎಸ್. ಹೂಲಗೇರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT