ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ? 
ಪ್ರವಾಸ-ವಾಹನ

ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ?

ಕಿಟಕಿಗಳನ್ನು ಮುಚ್ಚಿ ಎಸಿ ಆನ್ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವುದರಿಂದ ಸಂಭವಿಸುತ್ತಿರುವ ಜೀವಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಬೆಂಗಳೂರು: ಕಿಟಕಿಗಳನ್ನು ಮುಚ್ಚಿ ಎಸಿ ಆನ್ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವುದರಿಂದ ಸಂಭವಿಸುತ್ತಿರುವ ಜೀವಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ರೀತಿ ಮಾಡುವುದರಿಂದ ಕಾರಿನಲ್ಲಿ ಕಾರ್ಬನ್ ಮಾನಾಕ್ಸೈಡ್ ವ್ಯಾಪಿಸಲಿದೆ ಎನ್ನುತ್ತಾರೆ ಆಟೋಮೊಬೈಲ್ ತಜ್ಞರು. 
ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗ್ಯಾರೆಜ್ ನಲ್ಲಿ ಕಾರ್ ನಿಲ್ಲಿಸಿ ಕಿಟಕಿಗಳನ್ನು ಬಂದ್ ಮಾಡಿದ್ದ ಇಬ್ಬರು ಎಸಿ ಆನ್ ಮಾಡಿ ಕುಳಿತಿದ್ದರು. ಕೆಲಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದರು. 
ಕಾರು ಚಾಲನೆಯಲ್ಲಿಲ್ಲದಿದ್ದರೂ ಸಹ ಎಸಿ ಆನ್ ಮಾಡಿ ಒಳಗೆ ಕುಳಿತುಕೊಳ್ಳುವಂತಹ ಪ್ರವೃತ್ತಿ ಮುಂಗಾರು ಪೂರ್ವದ ವಾತಾವರಣದಲ್ಲಿ ಹೆಚ್ಚು ಕಂಡುಬರುತ್ತದೆ.  ಬಿಸಿಲಿನಲ್ಲಿ ತಂಪಾಗಿರಲು ಈ ರೀತಿ ಮಾಡುವುದು ಆ ಕ್ಷಣಕ್ಕೆ ಒಳ್ಳೆಯ ಉಪಾಯವಾಗಿದ್ದರೂ ಕಾರ್ಬನ್ ಮಾನಾಕ್ಸೈಡ್ ಸೇವಿಸುವುದರಿಂದ ಪ್ರಾಣಕ್ಕೇ ಹಾನಿಉಂಟಾಗಬಲ್ಲದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಗ್ಯಾರೇಜ್ ಗಳಂತಹ ಮುಚ್ಚಿದ ಪ್ರದೇಶಗಳಲ್ಲಿ ಕಾರನ್ನು ನಿಲ್ಲಿಸಿ ಎಸಿ ಆನ್ ಮಾಡಿ ಒಳಗೆ ಕೂರುವುದು ಇನ್ನೂ ಅಪಾಯಕಾರಿಯಾಗಿದ್ದು, ಕೇವಲ 2 ಗಂಟೆಗಳಲ್ಲಿ ಸಾವನ್ನು ಆಹ್ವಾನಿಸಿದಂತೆ ಎನ್ನುತ್ತಾರೆ ಆಟೋಮೊಬೈಲ್ ಇಂಜಿನಿಯರ್ ಆಗಿರುವ ನಚಿಕೇತ್ ರಾವ್. 
ಒಂದು ವೇಳೆ ಕಾರನ್ನು ನಿಲ್ಲಿಸಿದ ವೇಳೆ ಎಸಿ ಆನ್ ಮಾಡಿದರೂ ಫ್ರೆಶ್ ಏರ್ ಸೆಟ್ಟಿಂಗ್ ನ್ನು ಆಯ್ಕೆ ಮಾಡಿದರೆ, ಕಾರಿನಲ್ಲಿರುವ ಹವಾನಿಯಂತ್ರಕ ಹೊರಗಿನ ಗಾಳಿಯೂ ಕಾರಿನೊಳಗೆ ಪ್ರವೇಶಿಸುವಂತೆ ಮಾಡುತ್ತದೆ.  ಈ ರೀತಿ ಮಾಡುವುದರಿಂದ ಕಾರಿನೊಳಗಿರುವ ಗಾಳಿ ಪುನಃಬಳಕೆಯಾಗುವಂತಾಗುತ್ತದೆ ಎಂದು ನಚಿಕೇತ್ ರಾವ್ ಹೇಳಿದ್ದಾರೆ. ಕಾರು ಚಾಲನೆಯಲ್ಲಿರಬೇಕಾದರೆ ಚಾಲಕ ಅಗತ್ಯವಿದ್ದಾಗ ಕಿಟಕಿಗಳನ್ನು ತೆರೆದು ಒಳಗಿನ ಗಾಳಿ ಹೊರಹೋಗುವಂತೆ ಮಾಡಬಹುದು, ಆದರೆ ಚಾಲನೆಯಲ್ಲಿಲ್ಲದಿದ್ದಾಗ ಒಳಗೆ ಕುಳಿತು ನಿದ್ದೆ ಮಾಡಿದರೆ ಅದು ಅಪಾಯಕಾರಿ ಎಂದು  ತಜ್ಞರು ಎಚ್ಚರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT