ಸಂಗ್ರಹ ಚಿತ್ರ 
ಪ್ರವಾಸ-ವಾಹನ

ರೈಲ್ವೆ ಖಾಸಗೀಕರಣ: ರಾಜ್ಯದ ಎಂಟು ಮಾರ್ಗಗಳಲ್ಲಿ ಪ್ರೈವೇಟ್ ಟ್ರೈನ್ ಕಾರ್ಯಾಚರಣೆ?

ಕರ್ನಾಟಕದ ಎಂಟು ಮಾರ್ಗಗಳಲ್ಲಿ ಖಾಸಗಿ ರೈಲುಗಳನ್ನು ಓಡಿಸಲುಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದ್ದು ಅವುಗಳಲ್ಲಿ ಏಳು ಬೆಂಗಳೂರು ರೈಲ್ವೆ ವಿಭಾಗದಲ್ಲಿರಲಿದೆ.

ಬೆಂಗಳೂರು: ಕರ್ನಾಟಕದ ಎಂಟು ಮಾರ್ಗಗಳಲ್ಲಿ ಖಾಸಗಿ ರೈಲುಗಳನ್ನು ಓಡಿಸಲುಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದ್ದು ಅವುಗಳಲ್ಲಿ ಏಳು ಬೆಂಗಳೂರು ರೈಲ್ವೆ ವಿಭಾಗದಲ್ಲಿರಲಿದೆ. ಮುಂಬರುವ ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್ ನಿಂದ ಪ್ರಾರಂಭಗೊಳ್ಳುವಂತೆ  'ವಿಶ್ವ ದರ್ಜೆಯ ರೈಲ್ವೆ ಸೇವೆ” ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಮತ್ತು ನಿತಿ ಆಯೋಗ 00 ವಿವಿಧ ಮಾರ್ಗಗಳಲ್ಲಿ ದೇಶಾದ್ಯಂತ 150 ಪ್ರಯಾಣಿಕ ರೈಲುಗಳಲ್ಲಿ ತನ್ನ ಪ್ರಸ್ತಾವನೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ. 

ಬೈಯಪ್ಪನಹಳ್ಳಿ ಕವರ್ ಸಿಟಿಗಳಿಂದ ಪ್ರಸ್ತಾಪಿಸಲಾದ ಏಳು ಮಾರ್ಗಗಳು ಆರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಜಾರ್ಖಂಡ್. ರಾಜ್ಯಗಳನ್ನು ಸಂಪರ್ಕಿಸಲಿದೆ. ಆದರೆ ಬೆಂಗಳೂರಿನಿಂದ ಕಲಬುರಗಿ-ಪನ್ವೇಲ್ ಮಾರ್ಗದ ಪ್ರಸ್ತಾವನೆ ಮಾತ್ರವೇ ಮಾಡದೆ ಉಳಿದಿದೆ.

ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಪ್ರಸ್ತಾಪಿಸಲಾದ ಮಾರ್ಗಗಳು ಇಂತಿದೆ- ಪಾಟಲಿಪುತ್ರ ನಿಲ್ದಾಣ; ಗೋರಖ್‌ಪುರ ನಿಲ್ದಾಣ ಮತ್ತು ಪ್ರಜ್ಞರಾಜ್ ನಿಲ್ದಾಣ; ಗುವಾಹಟಿ ನಿಲ್ದಾಣ; ತಾಂಬರಂ ನಿಲ್ದಾಣ; ಶಾಲಿಮಾರ್ ನಿಲ್ದಾಣ; ಮತ್ತು ಹಟಿಯಾ ನಿಲ್ದಾಣ.

ಪ್ರಯಾಣಿಕರು ಮುಂಬೈ-ಬೆಂಗಳೂರು ನಡುವೆ ಸಂಪರ್ಕಕ್ಕಾಗಿ ಆಗ್ರಹಿಸಿದ್ದು, ಕರ್ನಾಟಕ ರೈಲು ಬಳಕೆದಾರರ ಗುಂಪಿನ ಪ್ರತಿನಿಧಿಯೊಬ್ಬರು “18 ರಿಂದ 19 ಗಂಟೆಗಳಲ್ಲಿ ಬೆಂಗಳೂರು ಮತ್ತು ಮುಂಬೈಗಳನ್ನು ಸಂಪರ್ಕಿಸಬಲ್ಲ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ನಾವು ಹೊಂದಿದ್ದರೆ, ಅದು ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ. ಈಗಿರುವ ಉದ್ಯಾನ್ ಎಕ್ಸ್‌ಪ್ರೆಸ್ ಸುಮಾರು 24 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಿದ್ದಾರೆ. 

ಈ ಮಾರ್ಗವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ರಾಜ್ಯ ಸಚಿವ ಸುರೇಶ್ ಸಿ ಅಂಗಡಿ ಮತ್ತು ಸಂಸದರಾದ ಪಿಸಿ ಮೋಹನ್, ಸದಾನಂದ ಗೌಡ ಮತ್ತು ತೇಜಸ್ವಿ ಸೂರ್ಯ ಅವರಿಗೆ ಟ್ವೀಟ್ ಮಾಡಿದ್ದಾರೆ. ಉದ್ದೇಶಿತ ಪಟ್ಟಿಗೆ ಸೇರಿಸಲಾಗಿದೆ. ಇನ್ನು ನೈಋತ್ಯ ರೈಲ್ವೆ  ಮುಖ್ಯ ಜನಸಂಪರ್ಕ ಅಧಿಕಾರಿ ಇ ವಿಜಯ ಹೇಳಿದಂತೆ ಯೋಜನೆಯ ಕರಡು ಮಾತ್ರವೇ ಬಿಡುಗಡೆಯಾಗಿದ್ದು . “ಆಯ್ದ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಸಹಭಾಗಿತ್ವವನ್ನು  ಆಹ್ವಾನಿಸುವ ವಿಧಾನಗಳನ್ನು ರೈಲ್ವೆ ಸಚಿವಾಲಯವು ರೂಪಿಸುತ್ತಿದೆ. ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT