ಪ್ರವಾಸ

ನಮ್ಮ ₹10 ಈ ದೇಶದಲ್ಲಿ ₹1260! ಕೇವಲ ₹35ಸಾವಿರಕ್ಕೆ ವಿದೇಶ ಪ್ರವಾಸ, ಕಡಿಮೆ ಬಜೆಟ್​​ನಲ್ಲಿ ರಾಜಾತಿಥ್ಯ ಸಿಗುವ ಆ ದೇಶ ಯಾವುದು ಗೊತ್ತಾ?

ನಮ್ಮ ದೇಶದಲ್ಲಿ ಕೇವಲ ₹10 ರೂಪಾಯಿಗೆ ಸಿಗುವ ಒಂದು ಸಣ್ಣ ವಸ್ತು, ಭಾರತದಿಂದ ಕೇವಲ 3 ಗಂಟೆಗಳ ದೂರದಲ್ಲಿರುವ ದೇಶದ ಹಣದ ಲೆಕ್ಕದಲ್ಲಿ ಬರೋಬ್ಬರಿ 1260 ರೂಪಾಯಿ ಆಗುತ್ತದೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಹಾಗಾದ್ರೆ, ಕೇವಲ ₹35,000 ರೂಪಾಯಿಯಲ್ಲಿ 4 ದಿನದ ರಾಜಾತಿಥ್ಯ ಅನುಭವ ಪಡೆಯಬಹುದು.

ವಿದೇಶಕ್ಕೆ ಹೋಗಬೇಕು ಎನ್ನುವುದು ಬಹಳಷ್ಟು ಜನರ ಕನಸು. ಆದರೆ ಡಾಲರ್ ಮತ್ತು ಯೂರೋ ದೇಶಗಳಲ್ಲಿ ಖರ್ಚು ತುಂಬಾ ಜಾಸ್ತಿಯಾಗುತ್ತದೆ, ಬಜೆಟ್ ದೊಡ್ಡದಾಗುತ್ತದೆ ಎಂದು ಅನೇಕರು ಈ ಆಸೆಯನ್ನು ಪಕ್ಕಕ್ಕೆ ಇಡುತ್ತಾರೆ. ಆದರೆ ನಿಮಗೆ ಗೊತ್ತಾ, ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಿ ರಾಜಾತಿಥ್ಯ ಅನುಭವಿಸುವ ಅವಕಾಶವಿದೆ. ಯಾಕಂದ್ರೆ, ನಮ್ಮ ಕೇವಲ 10 ರೂಪಾಯಿಗೆ ಅಲ್ಲಿ 1260 ರೂಪಾಯಿ ಮೌಲ್ಯ ಸಿಗುತ್ತದೆ.

ಹೌದು, ಭಾರತೀಯ ರೂಪಾಯಿಗೆ ಭಾರಿ ಮೌಲ್ಯವಿರುವ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ಅದ್ಭುತ ದೇಶ ಉಜ್ಬೇಕಿಸ್ತಾನ್.! ಆ ಕುರಿತ ವರದಿ ಇಲ್ಲಿದೆ:

100 ರೂಪಾಯಿ ಕೊಟ್ಟರೆ 13,000!: ಭಾರತದಿಂದ ಕೇವಲ 3 ಗಂಟೆ ದೂರದಲ್ಲಿರುವ ಈ ದೇಶದಲ್ಲಿ ನಮ್ಮ 10 ರೂಪಾಯಿ ಸರಿಸುಮಾರು 1260 ಸೋಮ್ ಗೆ ಮಾನವಾಗಿದೆ. ಅಂದರೆ 100 ರೂಪಾಯಿ ಕೊಟ್ಟರೆ 12700 ರಿಂದ 13000 ಸೋಮ್ ವರೆಗೆ ಸಿಗುತ್ತದೆ. ಇದರಿಂದಾಗಿ ಅಲ್ಲಿನ ಆಹಾರ ಸ್ಥಳೀಯ ಸಾರಿಗೆ ಶಾಪಿಂಗ್ ಮತ್ತು ಸ್ಮಾರಕಗಳ ಟಿಕೆಟ್ ಎಲ್ಲವೂ ತುಂಬಾ ಅಗ್ಗವಾಗುತ್ತದೆ. ಡಾಲರ್ ಇರುವ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅರ್ಧದಷ್ಟು ಖರ್ಚಿನಲ್ಲಿ ಪ್ರವಾಸ ಮುಗಿಸಬಹುದು.

ಸುಲಭ ವೀಸಾ ಮತ್ತು ಕಡಿಮೆ ಖರ್ಚಿನ ಟ್ರಿಪ್: ಭಾರತೀಯರಿಗೆ ಉಜ್ಬೇಕಿಸ್ತಾನ್ ನ ಇ ವೀಸಾ ಪ್ರಕ್ರಿಯೆ ತುಂಬಾ ಸರಳವಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ 2 ದಿನದಲ್ಲಿ ವೀಸಾ ಬರುತ್ತದೆ. ವೀಸಾ ಶುಲ್ಕ ಕೂಡ ಕಡಿಮೆಯಾಗಿದೆ. ಫ್ಲೈಟ್, ಹೋಟೆಲ್, ಊಟ ಮತ್ತು ಸೈಟ್ ಸೀಯಿಂಗ್ ಸೇರಿಸಿ 4 ದಿನದ ಟ್ರಿಪ್ 30,000 ರಿಂದ 35,000 ರೂಪಾಯಿಯಲ್ಲಿ ಮುಗಿಸಬಹುದು. ಇದು ಇತರೆ ವಿದೇಶಗಳಿಗೆ ಹೋಲಿಸಿದರೆ ಅರ್ಧದಷ್ಟು ಖರ್ಚು ಮಾತ್ರ.

ನೋಡಲೇಬೇಕಾದ ಮುಖ್ಯ ಸ್ಥಳಗಳು: ಉಜ್ಬೇಕಿಸ್ತಾನ್ ತನ್ನ ಶ್ರೀಮಂತ ಇತಿಹಾಸ ಮತ್ತು ಸುಂದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಸಮರ್ಕಂಡ್ ಬುಖಾರಾ ಮತ್ತು ಖಿವಾದಂತಹ ಯುನೆಸ್ಕೋ ವಿಶ್ವ ಪರಂಪರೆಯ ನಗರಗಳು ಇಲ್ಲಿವೆ. ನೀಲಿ ಗುಮ್ಮಟದ ಮಸೀದಿಗಳು ಮತ್ತು ಹಳೆಯ ಬಜಾರ್ ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಫೋಟೋಗ್ರಫಿಗೆ ಮತ್ತು ಇನ್ ಸ್ಟಾಗೆ ಇದು ಸೂಪರ್ ತಾಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ: ಆರು ತಿಂಗಳ ಬಳಿಕ ಕೊಲೆಗಾತಿ ಪತ್ನಿ, ಪ್ರಿಯಕರನ ಬಂಧನ!

ಪಾಕ್ ನಲ್ಲಿ ಮತ್ತೆ 'ದುರಂಧರ್' ಆಟ: ಲಷ್ಕರ್ ಕಮಾಂಡರ್ ನಿಗೂಢ ಸಾವು, ಊಟ ಮಾಡಿ ಮಸೀದಿ ಬಳಿ ಕುಸಿದು ಬಿದ್ದ Qari Saeed Abdul Aziz

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ