ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ₹39,000 ಕೋಟಿ ಹಗರಣ ನಡೆಸಿದೆ ಎಂದು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಬುಧವಾರ ಆರೋಪಿಸಿದ್ದಾರೆ.
35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ಗೆ ನೀಡುತ್ತಿರುವ ಟೆಂಡರ್ನ ಒಟ್ಟು ಮೊತ್ತದಲ್ಲಿ ₹10,000 ಕೋಟಿ ಕಿಕ್ಬ್ಯಾಕ್ ಪಡೆಯಲಾಗಿದೆ ಎಂದು ಅಶೋಕ ಆರೋಪ ಮಾಡಿದ್ದಾರೆ.
ಕಿಕ್ಬ್ಯಾಕ್ ಆರೋಪ ಕುರಿತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಅಶೋಕ್ ಅವರು ಕಸ ಮಾಫಿಯಾ ಗ್ಯಾಂಗ್ ನ ಏಜೆಂಟ್ ರೀತಿ ಮಾತನಾಡುತ್ತಿದ್ದಾರೆ. ಈ ಮಾಫಿಯಾಗೆ ವಕ್ತಾರರಾಗಿ ಆಶೋಕ್ ಮಾತನಾಡುತ್ತಿರುವುದು ನನಗೆ ಬಹಳ ಆಶ್ಚರ್ಯ ತಂದಿದೆ.
ಯಾವುದೇ ರೀತಿಯ ತನಿಖೆ ಮಾಡಿಸಲಿ. ಐ ಆ್ಯಮ್ ರೆಡಿ. ಅವರಿಗೆ ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.