ಭವಿಷ್ಯದ ಮಾನವ ಬಾಹ್ಯಾಕಾಶ ಯಾನಕ್ಕೆ ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಬಾಹ್ಯಾಕಾಶ ಎಕ್ಸ್ಪೋದ ಒಂಬತ್ತನೇ ಆವೃತ್ತಿಯಲ್ಲಿ 'ದಿ ನೆಕ್ಸ್ಟ್ ಚಾಪ್ಟರ್ ಆಫ್ ಸ್ಪೇಸ್: ಎ ಕಾನ್ವರ್ಸೇಶನ್ ಆನ್ ಎಕ್ಸ್ಪ್ಲೋರೇಶನ್, ಸೈನ್ಸ್ ಅಂಡ್ ಇನ್ನೋವೇಶನ್' ಕುರಿತ ಸಂವಾದದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಮಾನವೀಯತೆಯು ಚಂದ್ರನತ್ತ ಮರಳುತ್ತದೆ ಮತ್ತು ಬಾಹ್ಯಾಕಾಶಕ್ಕೆ "ಒಂದು ದೇಶವಾಗಿ ಅಲ್ಲ, ಮನುಷ್ಯರಾಗಿ" ಹೆಚ್ಚು ದೂರ ಹೋಗುತ್ತದೆ ಎಂದು ಸುನಿತಾ ಹೇಳಿದರು.
ದೇಶಗಳು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪರಸ್ಪರರ ವಿಧಾನಗಳಿಂದ ಪ್ರಯೋಜನ ಪಡೆಯಬಹುದು ಎಂದು ವಿಲಿಯಮ್ಸ್ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.