ಮಹಿಳೆ-ಮನೆ-ಬದುಕು

ಸೂರಾಲು ಸಿರಿ

ನಿರ್ದೇಶಕ ದಿ.ಜಿ.ವಿ. ಅಯ್ಯರ್ 1987ರಲ್ಲಿ ನಿರ್ದೇಶಿಸಿದ 'ಮಧ್ವಾಚಾರ್ಯ' ಚಿತ್ರದಲ್ಲಿ ಕಂಡ ಹಳೇ ಮನೆಯೊಂದರ ...

ನಿರ್ದೇಶಕ ದಿ.ಜಿ.ವಿ. ಅಯ್ಯರ್ 1987ರಲ್ಲಿ ನಿರ್ದೇಶಿಸಿದ 'ಮಧ್ವಾಚಾರ್ಯ' ಚಿತ್ರದಲ್ಲಿ ಕಂಡ ಹಳೇ ಮನೆಯೊಂದರ ದೃಶ್ಯ ಇನ್ನೂ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಸೂರಾಲು ಅರಮನೆಯ ಸೊಬಗೇ ಈ ಹಸಿರು ನೆನಪಿಗೆ ಕಾರಣ.
ಉಡುಪಿಯಿಂದ 25 ಕಿ.ಮೀ. ದೂರ. ಬ್ರಹ್ಮಾವರಕ್ಕೆ ಹೋಗಿ ಕೊಕ್ಕಣರೈ ಹಾದಿಯಲ್ಲಿ ಸಿಗುವ ಕ್ರಿ.ಶ.1511ರಲ್ಲಿ ನಿರ್ಮಾಣವಾದ ಅರಮನೆ. ತುಳುನಾಡಿನ ಇತಿಹಾಸವನ್ನು ಕಾಪಿಡುವ ಸಾಕ್ಷ್ಯವೂ ಹೌದು. ಜೈನ ವಂಶದ ಅರಸರ ನಿರ್ಮಾಣವಿದು. ಒಂದು ಎಕರೆ ವಿಸ್ತಾರದ ಜಾಗದಲ್ಲಿದೆ. ಆ ಸಮಯ ನಾಡಿನ ಅಲ್ಲಲ್ಲಿ ಆಳುತ್ತಿದ್ದ ಅರಸರು ನಿರ್ಮಿಸಿದ 12 ಅರಮನೆಗಳಲ್ಲಿ ಒಂದೆನಿಸಿದರೂ ಇನ್ನೂ ಕುಸಿಯದೆ ಜೀವ ಹಿಡಿದಿಟ್ಟುಕೊಂಡಿರುವುದು ಇದೊಂದೇ. ರಾಜ್ಯದ ಏಕೈಕ ಮಣ್ಣಿನ ಅರಮನೆಯಾಗಿ ಬದುಕಿರುವುದು ಇದು ಮಾತ್ರ ಎಂಬ ಹೆಗ್ಗಳಿಕೆಯೂ ಇದೆ. ಹಸಿರು ಹೊಲಗಳ ನಡುವೆ ತಲೆಯೆತ್ತಿ ನಿಂತ ಈ ವಿಶಾಲವಾದ ಅರಮನೆಯ ಗೋಡೆಗಳನ್ನು ಪೂರ್ಣವಾಗಿ ಸುಟ್ಟ ಜೇಡಿಮಣ್ಣಿನಿಂದಲೇ ಕಟ್ಟಲಾಗಿದೆ. ಹುಲ್ಲುಮಿಶ್ರಿತವಾದ ಗಾರೆಗೆ ಸಗಣಿ ನೀರಿನ ದಟ್ಟವಾದ ಲೇಪನವಿದೆ. ಮಾಡಿಗೆ ನಾಡಹೆಂಚಿನ ಹೊದಿಕೆಯಿದೆ. ಎರಡು ಉಪ್ಪರಿಗೆಗಳಿವೆ. ಜೈನ ಮತ್ತು ಹಿಂದೂ ವಾಸ್ತುಶಿಲ್ಪದ ಕೌಶಲಕ್ಕೆ ಅಪ್ರತಿಮ ಸಾಕ್ಷಿಯಂತಿರುವ ಇದರಲ್ಲಿ ಭಾರಿ ಗಾತ್ರದ ಮರದ ತೊಲೆಗಳನ್ನೇ ಬಳಸಿದ್ದಾರೆ. ಕಿಟಕಿ, ಬಾಗಿಲು ಮತ್ತು ಮೇಲ್ಮುಚ್ಚಿಗೆಯಲ್ಲಿ ಸೂಕ್ಷ್ಮವಾದ ಕೆತ್ತನೆಗಳಿವೆ.
ಕುಸಿದು ಬೀಳುವ ಹಂತದಲ್ಲಿರುವ ಈ ಅರಮನೆಯಲ್ಲಿ 1983ರಿಂದ ಯಾರೂ ವಾಸವಾಗಿಲ್ಲ. ಸೂರಾಲನ್ನು ರಾಜಧಾನಿಯಾಗಿ ಮಾಡಿಕೊಂಡು ಈ ಅರಮನೆಯಲ್ಲಿ ಮೆರೆದಿದ್ದ ರಾಜವಂಶಕ್ಕೆ ಬೈಂದೂರಿನವರೆಗೆ ಅಧಿಪತ್ಯವಿತ್ತು. ವಿಜಯನಗರ, ಪೋರ್ಚುಗೀಸ್, ಮೈಸೂರು ರಾಜರು, ಬ್ರಿಟಿಷರು ಮೊಕ್ಕಾಂ ಹೂಡಿದ ಅರಮನೆಯಲ್ಲಿ ಡಿಸಿಲ್ವಾ ಎಂಬ ಪೋರ್ಚುಗೀಸ್ ಸೇನಾನಿ ಬಹುಕಾಲ ತಂಗಿದ್ದನಂತೆ. ಅನೇಕ ದೇಗುಲಗಳಿಗೆ ಒಡವೆಗಳು ಮತ್ತು ಅನೇಕ ಕೊಡುಗೆಗಳನ್ನು ನೀಡಿ ಉತ್ತಮ ಆಡಳಿತಕ್ಕೆ ಹೆಸರಾದ ಅವರ ರಾಜ್ಯಾಡಳಿತ ಹೈದರಾಲಿಯ ಕಾಲದಲ್ಲಿ ಅಂತ್ಯಗೊಂಡಿತಂತೆ. ಅರಮನೆಯೊಳಗೆ ಅನೇಕ ಕೊಠಡಿಗಳಿದ್ದು ಆ ಕಾಲದ ಮರದ ಬಾಗಿಲುಗಳು ಈಗಲೂ ಸುಭದ್ರ. ಅಂದಿನ ರಾಜರ ಆಡಳಿತದ ಸಭೆ ನಡೆಯುತ್ತಿದ್ದ ಪಟ್ಟದ ಚಾವಡಿ ಬರಿದಾಗಿದೆ. ಪದ್ಮಾವತಿ ಕುಮಾರರಾಯರ ಮಂಚಗಳಿದ್ದು ಇವರು ಅರಸರ ಆರಾಧ್ಯ ದೇವತೆಗಳಾಗಿದ್ದರು. ಕುಸಿಯುತ್ತಿರುವ ಅರಮನೆಯನ್ನು ತುಳುನಾಡಿನ ಇತಿಹಾಸದ ದ್ಯೋತಕವಾಗಿ ಸಂರಕ್ಷಿಸಬೇಕೆಂಬ ಜನತೆಯ ಕೂಗಿಗೆ ಸರ್ಕಾರವೂ ಸ್ಪಂದಿಸಿ ಅನುದಾನ ಪೂರೈಸಿದೆ. ಆದರೆ ಕೈಗೊಂಡ ಕೆಲಸಗಳು ತೃಪ್ತಿಕರವಾಗಿಲ್ಲ ಎನ್ನುತ್ತಾರೆ ಜನ.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT