ಮನೆಯೇ ಮಂತ್ರಾಲಯ ಎನ್ನುತ್ತಾರೆ. ಹಾಗೆ ನಾವು ವಾಸ ಮಾಡುವ ಮನೆ ದೇವಾಲಯವಿದ್ದಂತೆ ಅದನ್ನು ಸುಂದರ, ಸ್ವಚ್ಛವಾಗಿಡುವುದು ಗೃಹಿಣಿಯ ಆದ್ಯ ಕರ್ತವ್ಯ. ಇಡಿ ಮನೆಯ ಜವಾಬ್ದಾರಿ ಆ ಮನೆಯ ಒಡತಿಯದ್ದು, ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಮನೆಯನ್ನು ಅಚ್ಚು ಕಟ್ಟಾಗಿ ಇಡಬೇಕಾಗುತ್ತದೆ.
ಸದ್ಗೃಹಿಣಿಯಾದವಳು ಕೆಲವೊಂದು ನೀತಿನಿಯಮಗಳನ್ನು ಪಾಲಿಸದಿದ್ದರೇ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ. ಮನೆಯ ಸದಸ್ಯರ ಒಳಿತಿಗಾಗಿ ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ,
- ಮುಸ್ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯ ಕಸ ಗುಡಿಸಬೇಡಿ,
- ರಾತ್ರಿ ಮಲಗುವ ಮುನ್ನ ಕಸ ಗುಡಿಸಿಗದರೇ ರಾತ್ರಿ ಕಸವನ್ನು ಹೊರಗೆ ಹಾಕಬೇಡಿ.
- ಮನೆಯ ಬಾಲಿಗ ಹೊಸ್ತಿಲ ಮೇಲೆ ನಿಲ್ಲಬೇಡಿ.
- ಸಂಜೆ ದೀಪ ಹಚ್ಚುವ ಮುನ್ನ ಮುಂದಿನ ಬಾಗಿಲು ತೆರೆದು ಹಿಂದಿನ ಬಾಗಿಲನ್ನು ಮುಚ್ಚಿ.
- ಮೊರ ಪೊರಕೆಗಳನ್ನು ಕಾಲಿನಿಂದ ತುಳಿಯಬೇಡಿ, ಪೊರಕೆ ಲಕ್ಷ್ಮಿ ಇದ್ದಂತೆ.
- ಮನೆ ಬಾಗಿಲ ಎದುರು ಪಾದರಕ್ಷೆಗಳನ್ನು ಬಿಡಬಾರದು.
- ಮನೆಯ ಸಾರಿಸಿದ ಮೇಲೆ ರಂಗೋಲಿ ಹಾಕದೇ ಖಾಲಿ ಬಿಡಬಾರದು. ಇದು ಅಶುಭ ಸೂಚಕ.
- ಮಂಗಳವಾರ ಶುಕ್ರವಾರ ಮನೆಯಲ್ಲಿ ಜಗಳವಾಡುವುದು, ಅವ್ಯಾಚ್ಯ ಶಬ್ದಗಳಿಂದ ಯಾರನ್ನೂ ಬೈಯ್ಯಬೇಡಿ.
- ಹರಿದು ಹೋದ ಬಟ್ಟೆಯನ್ನು ಧರಿಸಬಾರದು.
- ಕೈಕಾಲುಗಳ ಉಗುರುಗಳನ್ನು ತುಂಬಾ ಬೆಳೆಸಬಾರದು. ಮಂಗಳವಾರ ಹಾಗೂ ಶುಕ್ರವಾರ ಉಗುರು ಕತ್ತರಿಸಿಬಾರದು.
- ಕೆದರಿದ ಜಡೆ, ಕುಂಕುಮವಿರದ ಹಣೆ, ಅರಿಶಿನ ಹಚ್ಚದ ಕೈಕಾಲುಗಳು ಮಹಿಳೆಯರಿಗೆ ಅಶುಭ ಸೂಚಕ
- ಚಾಪೆ ಹಾಸಿಗೆ, ಸೋಫಾ,ಮೇಲೆ ಕುಳಿತು ದೇವರ ಪೂಜೆ ಮಾಡಬೇಡಿ.
- ಮಹಿಳೆಯರು ನಡೆಯುವಾಗ ಕಾಲಿನಿಂದ ತುಂಬಾ ಸದ್ದು ಮಾಡಬಾರದು,