ಚಂದ್ರರೇಖಾ 
ವಿಶ್ವ ಮಹಿಳಾ ದಿನ

ಮೇಕಪ್, ಫ್ಯಾಶನ್ ನಲ್ಲಿ ವೃತ್ತಿ ಕಂಡುಕೊಂಡಿರುವ ಚಂದ್ರರೇಖಾ  

ಮೇಕಪ್, ಫ್ಯಾಶನ್ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಬಹುಶಃ ಮೇಕಪ್ ನ್ನು ಇಷ್ಟಪಡದ ಯುವತಿಯರು, ಮಹಿಳೆಯರು ಬೆರಳೆಣಿಕೆಯಷ್ಟು ಇರಬಹುದೇನೋ.

ಮೇಕಪ್, ಫ್ಯಾಶನ್ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಬಹುಶಃ ಮೇಕಪ್ ನ್ನು ಇಷ್ಟಪಡದ ಯುವತಿಯರು, ಮಹಿಳೆಯರು ಬೆರಳೆಣಿಕೆಯಷ್ಟು ಇರಬಹುದೇನೋ. ಹೀಗೆ ಮನೆಯಲ್ಲಿ ತನ್ನಷ್ಟಕ್ಕೆ ಮಾಡುತ್ತಿದ್ದ ಮೇಕಪ್ ನಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಅದಕ್ಕೆ ಮಾರುಕಟ್ಟೆ ಗಿಟ್ಟಿಸಿಕೊಂಡು ಹಣ ಸಂಪಾದನೆ, ಜನಪ್ರಿಯತೆ ಪಡೆದುಕೊಂಡ ಮಹಿಳೆ ಬೆಂಗಳೂರಿನಲ್ಲಿದ್ದಾರೆ. ಅವರೇ ಚಂದ್ರರೇಖಾ.


ಸಣ್ಣ ಮಟ್ಟದಿಂದ ಆರಂಭವಾದ ಅವರ ಈ ಕಲೆ ಇಂದು ಸೆಲೆಬ್ರಿಟಿಗಳು, ಸಿನೆಮಾ ಕಲಾವಿದರು, ಫ್ಯಾಶನ್ ಶೋ, ಕಾರ್ಪೊರೇಟ್ ಕಂಪೆನಿಗಳ ಈವೆಂಟ್ ಗಳಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಮೇಕಪ್ ಮಾಡುವವರೆಗೆ ಬೆಳೆದಿದ್ದು, ವಿರಾಮವಿಲ್ಲದಷ್ಟು ಕೆಲಸ ಅವರಿಗೆ ಸಿಗುತ್ತಿದೆ.


ಮೇಕಪ್ ಕಲಾವಿದೆಯಾಗಿ ತಾವು ಬೆಳೆದ ರೀತಿಯನ್ನು ಚಂದ್ರರೇಖಾ ವಿವರಿಸಿದ್ದು ಹೀಗೆ: ನನಗೆ ಮೇಕಪ್, ಫ್ಯಾಶನ್ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು, ಮನೆಯಲ್ಲಿಯೇ ನನ್ನ ಪಾಡಿಗೆ, ನನ್ನ ಮಕ್ಕಳು, ತಂಗಿಗೆ ಮಾಡುತ್ತಿದ್ದೆ, ನಂತರ ಪಾರ್ಲರ್ ನಲ್ಲಿ ಸ್ವಲ್ಪ ತರಬೇತಿ ಪಡೆದುಕೊಂಡೆ. ಏಕೆ ಇದನ್ನು ಒಂದು ವೃತ್ತಿಯಾಗಿ ಮಾಡಿಕೊಳ್ಳಬಾರದು ಎಂದು ನನಗೆ ಆನಿಸತೊಡಗಿತು. ಹೀಗೆ ಫ್ಯಾಶನ್ ಇಂಡಸ್ಟ್ರಿಗೆ ಕಾಲಿಟ್ಟು 10 ವರ್ಷವಾಗಿದ್ದು, ಕಳೆದ ಮೂರು ವರ್ಷಗಳಿಂದ ಒಂದು ಉದ್ಯಮವಾಗಿ ಬೆಳೆದಿದೆ. 


ಜನರಿಂದ ಬಾಯಿಂದ ಬಾಯಿಗೆ ಪ್ರಚಾರವಾಗಿ, ಸೋಷಿಯಲ್ ಮೀಡಿಯಾಗಳಿಂದ ನನ್ನ ಮೇಕಪ್ ಬಗ್ಗೆ ಜನರು ತಿಳಿದುಕೊಂಡು ಪ್ರಚಾರವಾಗಿ ನನಗೆ ಅವಕಾಶ ಸಿಗುವುದು ಹೆಚ್ಚುತ್ತಾ ಹೋಯಿತು.ಫ್ಯಾಶನ್ ಶೋಗಳಲ್ಲಿ, ಸಿನೆಮಾಗಳಲ್ಲಿ, ಜಾಹಿರಾತುಗಳಲ್ಲಿ ಅವಕಾಶಗಳು ಸಿಗುತ್ತಿವೆ. ಬರ್ತ್ ಡೇ ಪಾರ್ಟಿಗಳು, ಮದುವೆ ಸಮಾರಂಭಗಳಲ್ಲಿ, ಮದುಮಗಳ ಮೇಕಪ್ ಹೀಗೆ ಬಿಡುವಿಲ್ಲದ ಕೆಲಸಗಳು ಸಿಗುತ್ತಿವೆ. 


ಮೇಕಪ್ ಎಂಬ ಪರಿಕಲ್ಪನೆಯನ್ನು ಒಂದು ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ನನ್ನ ಆಸೆ. 3 ಸಾವಿರದಿಂದ 30 ಸಾವಿರದವರೆಗೆ ನನಗೆ ಒಂದೊಂದು ಕಾರ್ಯಕ್ರಮದಿಂದ ಆದಾಯ ಬರುತ್ತಿದೆ.ಸೋಷಿಯಲ್ ಮೀಡಿಯಾದಿಂದ ನನಗೆ ಹೆಚ್ಚು ಅವಕಾಶಗಳು ಸಿಗುತ್ತಿದೆ ಎನ್ನುತ್ತಾರೆ. 

ಚಂದ್ರರೇಖಾ ಅವರ ಮೊಬೈಲ್ ಸಂಖ್ಯೆ:9844440645

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT