ಅಮ್ಮನೊಂದಿಗೆ ಗುರುದತ್ತ 
ನನ್ನ ಸ್ಫೂರ್ತಿ

ಪರಿಪೂರ್ಣ ವ್ಯಕ್ತಿತ್ವ ನೀಡಿದ್ದು ತಾಯಿ

ನನಗೆ ಜೀವ ನೀಡಿ ನನ್ನ ಜೀವನವನ್ನು ತುಂಬಾ ಹೃದಯಂಗಮವಾಗಿ ರೂಪಿಸಿದ ಮಹಿಳೆ. ನನ್ನ ಪ್ರೀತಿಯ ಅಮ್ಮ. ಜನನೀ ಜನ್ಮ ...


ನನಗೆ ಜೀವ ನೀಡಿ ನನ್ನ ಜೀವನವನ್ನು ತುಂಬಾ ಹೃದಯಂಗಮವಾಗಿ ರೂಪಿಸಿದ ಮಹಿಳೆ. ನನ್ನ ಪ್ರೀತಿಯ ಅಮ್ಮ. ಜನನೀ ಜನ್ಮ ಭೂಮಿಶ್ಚ ಸ್ವರ್ಗದಪಿ ಗರಿಯಸೀ ಎಂಬ  ಮಾತಿನಂತೆ  
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು. ಅಮ್ಮ ಎನ್ನುವ ಎರಡು ಅಕ್ಷರದಲ್ಲಿ ಅಡಿಗಿದೆ ನಿಡವಾದ ನಿರ್ಮಲ, ಪರಿಶುದ್ಧ ಪ್ರೇಮದ ಪೂರ್ಣ ವ್ಯಕ್ತಿತ್ವ.  ನಾನು ಎಂಬ ಈ ಚೈತನ್ಯವನ್ನು  ತನ್ನ ಗರ್ಭದಲ್ಲಿ  9 ತಿಂಗಳು ಪ್ರೀತಿಯಿಂದ ಪೋಷಿಸಿ, ತನ್ನ ಸಕಲ ಶಕ್ತಿಯನ್ನು ಧಾರೆ ಎರೆದು, ಕಷ್ಟ ನೋವುಗಳನ್ನು ಪೂರ್ಣ ಪ್ರಮಾಣದಲ್ಲಿ  ಆನಂದದಿಂದ ಸ್ವೀಕರಿಸಿ ನನಗೆ ಸುಂದರ ರೂಪ ನೀಡಿ ಈ ವಸುಂಧರೆಗೆ ಅವತರಣ ಮಾಡಿಸಿ ನನ್ನನ್ನು ಕಷ್ಟ ಪಟ್ಟು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ, ಪರಿಪೂರ್ಣ ವ್ಯಕ್ತಿತ್ವ ನೀಡಿದ ನನ್ನ ಪ್ರೀತಿಯ ಅಮ್ಮನಿಗೆ ನಾನು ಚಿರ ಋಣಿ.  ಏನೇ ನೋವಾದರೂ ಹೃದಯ ಕೂಗುವುದು ಅಮ್ಮ ಎಂದು.  ಈ ವಿಶ್ವದಲ್ಲಿ ಸಕಲ ಜೀವಿಗಳಿಗೂ ಪ್ರೀತಿಯ ದೇವತೆಯಾಗಿರುವ ದೇವರ ಕೊಡುಗೆ ಅಮ್ಮ. ಅಮ್ಮನ ಪವಿತ್ರ ಪ್ರೀತಿಯ ಬಗ್ಗೆ ಹೇಳಲು ಪದಪುಂಜ ಸಾಲದು. ನನ್ನ ಆತ್ಮ ಶಕ್ತಿಯ ಆರಾಧ್ಯ ದೇವತಾ ಸ್ವರೂಪಿಯಾದ ನನ್ನ ಅಮ್ಮನಿಗೆ , ಪ್ರಪಂಚದ ಎಲ್ಲಾ ಅಮ್ಮಂದಿರಿಗೆ ನನ್ನ ಹೃತ್ಪೂರ್ವಕ ನಮನಗಳು.
ತಾಯಿ ನಿನ್ನ ಮಡಿಲಲಿ
ಕಣ್ಣ ತೆರೆದ ಕ್ಷಣದಲಿ...
ಸೂತ್ರವೊಂದು ಬೆಸೆಯಿತೆಮ್ಮ
ಸಂಬಂಧದದ ನೆವದಲಿ...
ಮಾತೃ ದೇವೋ ಭವ

ಗುರುದತ್ತ ಕೆ.ಜಿ ಶಿವಮೊಗ್ಗ
ಅಮೆರಿಕ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ