ಆದಾಯ ತೆರಿಗೆ ಇಲಾಖೆ ೨೦೧೩ ತರಬೇತಿ ಪಡೆದ ತಂಡ 
ನನ್ನ ಸ್ಫೂರ್ತಿ

ಶಾಂತಿ ಮೇಡಂ...ನೀವೇ ನಮಗೆ ಸ್ಪೂರ್ತಿ

ಉನ್ನತ ಸ್ಥಾನಗಳನ್ನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂದಿನ ಹಲವು ಮಹಿಳೆಯರು, ಮಹಿಳಾ ಸಮಾನತೆಯ...

ಉನ್ನತ ಸ್ಥಾನಗಳನ್ನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂದಿನ ಹಲವು ಮಹಿಳೆಯರು, ಮಹಿಳಾ ಸಮಾನತೆಯ ದ್ಯೋತಕಗಳಾಗಿ, ಇತರೆ ಮಹಿಳೆಯರಿಗಲ್ಲದೆ ಪುರುಷರಿಗೂ ಸ್ಪೂರ್ತಿಯಾಗಿದ್ದಾರೆ. ಇವರ ಸಾಲಿನಲ್ಲೆ ನಿಲ್ಲುವ ಮಹಿಳೆ ನಮ್ಮ ಮೇಡಂ ಶಾಂತಿ.  ನನ್ನ ಹಾಗೂ ನನ್ನ ಎಲ್ಲ ಸಹೋದ್ಯೊಗಳಿಗೆ ಇನ್ ಕಮ್ ಟ್ಯಾಕ್ಸನ ಸ್ಪಷ್ಟ ಚಿತ್ರಣ ನೀಡಿ, ನಮಗೆಲ್ಲಾ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅವರಿತ್ತ ಮುನ್ನುಡಿಯೇ ಕಾರಣ. ಆದಾಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸದ್ಯ ಎಂ.ಎಸ್.ಆರ್.ಟಿ.ಐ ನ ಆಡಳಿತಾಧಿಕಾರಿಯಾಗಿದ್ದು, ಹೊಸದಾಗಿ ನೇಮಕಗೊಂಡ ಇಲಾಖೆಯ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದಾರೆ. ನಮ್ಮ 35 ಸದಸ್ಯರ ತಂಡಕ್ಕೆ ಇವರಿತ್ತ ಕೊಡುಗೆಯನ್ನು, ತರಬೇತಿಯನ್ನು ನಾವೆಲ್ಲ ನಿವೃತ್ತಿಯಾಗುವವರೆಗು ಮರೆಯಲು ಸಾಧ್ಯವಿಲ್ಲ.

ತರಬೇತಿ ಆರಂಭಗೊಂಡ ಕೆಲ ದಿನಗಳಲ್ಲೆ ನಮ್ಮೆಲ್ಲರ ನಡುವೆ ಒಂದು ರೀತಿಯ ಪರಸ್ಪರ ಪೂರಕ ವಾತವರಣ ನಿರ್ಮಿಸಿ, ತರಬೇತಿಗೆ ನಮ್ಮೆಲ್ಲರನ್ನು ಅಣಿಯಾಗಿಸಿದರು. ಇಲಾಖೆಯ ಬಗ್ಗೆ ಅವರಿಗಿದ್ದ ಪರಿಪೂರ್ಣ ತಿಳುವಳಿಕೆ, ಅವರ ಸಮಯ ಪರಿಪಾಲನೆ, ಅವರ ಸಂಯಮ ಚಿತ್ತ, ಎಲ್ಲಾ ಸದಸ್ಯರನ್ನು ತರಬೇತಿಯಲ್ಲಿ ಲೀನವಾಗುವಂತೆ ಮಾಡಿತ್ತು.
ಶಾಂತಿ ಮೇಡಂ ನಮಗೆಲ್ಲ ತರಬೇತಿ ನೀಡಿದ್ದು ನಮ್ಮ ತಂಡದ ಸದಸ್ಯರ ಪುಣ್ಯವೇ ಸರಿ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ಮನೆ ಮತ್ತು ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಇಂತಹ ಮಹಿಳೆಯರನ್ನು  ಮರೆಯಲು ಸಾಧ್ಯವೇ?


- ಅರ್ಪಿತಾ ನಾರಾಯಣ್  (೨೦೧೩ ತರಬೇತಿ ಪಡೆದ ತಂಡದ ಪರವಾಗಿ)
ಆದಾಯ ತೆರಿಗೆ ಇಲಾಖೆ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT