ಮಹಿಳಾ ಸಹಾಯವಾಣಿ

ಹೆಣ್ಣು ಭ್ರೂಣ ಹತ್ಯೆ ಕಾನೂನು ರೀತ್ಯಾ ಅಪರಾಧ

ಹೆಣ್ಣು ಮಗಳ ವಿವಾಹಕ್ಕೆ ತಗಲುವ ವೆಚ್ಚ, ವರದಕ್ಷಿಣೆ ಬೇಡಿಕೆ, ಗಂಡು ಮಕ್ಕಳು ವಂಶ ಬೆಳೆಸುತ್ತಾರೆ ಹಾಗೂ ಪಿತೃಗಳಿಗೆ ಮೋಕ್ಷ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ...

ಹೆಣ್ಣು ಮಗಳ ವಿವಾಹಕ್ಕೆ ತಗಲುವ ವೆಚ್ಚ, ವರದಕ್ಷಿಣೆ ಬೇಡಿಕೆ, ಗಂಡು ಮಕ್ಕಳು ವಂಶ ಬೆಳೆಸುತ್ತಾರೆ ಹಾಗೂ ಪಿತೃಗಳಿಗೆ ಮೋಕ್ಷ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ, ಆಸ್ತಿ ಪರರ ಪಾಲಾಗಬಾರದು ಎಂಬ ಆಸೆ, ತನ್ನಂತ ತನ್ನ ಮಗಳು ಜೀವನದ ಜಂಜಾಟಗಳಿಗೆ ಒಳಗಾಗಬಹುದೆಂಬ ಭಯದಿಂದ, ಹೆಣ್ಣು ಎಂಬ ಕೀಳರಿಮೆಯಿಂದಾಗಿ ಹೆಣ್ಣುಭ್ರೂಣ ಹತ್ಯೆಯಾಗುತ್ತದೆ.
ಆದರೆ ಇದು ಕಾನೂನು ರೀತ್ಯಾ ಅಪರಾಧವಾಗಿದ್ದು, ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ.

  • ಕಾನೂನು: ಗರ್ಭಧಾರಣ ಮತ್ತು ಪ್ರಸವ ಪೂರ್ವ ರೋಗ ನಿಧಾನ ತಂತ್ರಗಳ(ಲಿಂಗ ಆಯ್ಕೆ ನಿಷೇಧ) ಅಧಿನಿಯಮ 1994 ಜಾರಿಯಲ್ಲಿದೆ.
  • ಅಪರಾಧ: ಯಾರೇ ವ್ಯಕ್ತಿ ವೈಜ್ಞಾನಿಕ ತಂತ್ರಗಳನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣನಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯ ಮೇಲೆ ಒತ್ತಡ ಹೇರಿದರೆ ಅದು ಅಪರಾಧವಾಗುತ್ತದೆ.
  • ಸ್ಕ್ಯಾನಿಂಗ್: ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರದ ನೋಂದಣಿ ಕಡ್ಡಾಯ
ಅಪರಾಧಕ್ಕೆ ಶಿಕ್ಷೆ
ಮೊದಲ ಅಪರಾಧಕ್ಕೆ:
ನಂತರದ ಅಪರಾಧಕ್ಕೆ:
ಇಂತಹ ಕೃತ್ಯಕ್ಕೆ ಸಹಾಯ ಕೋರುವ ವ್ಯಕ್ತಿಯೂ ಶಿಕ್ಷಾರ್ಹ
ಮೊದಲ ಅಪರಾಧಕ್ಕೆ:
ನಂತರದ ಅಪರಾಧಕ್ಕೆ:

ದೂರು ನೀಡಲು ಸಂಪರ್ಕಿಸ ಬಹುದಾದ ಅಧಿಕಾರಿಗಳು
  • ತಹಸಿಲ್ದಾರರು
  • ಉಪ ವಿಭಾಗಾಧಿಕಾರಿಗಳು
  • ಜಿಲ್ಲಾ ಸಕ್ಷಮ ಪ್ರಾಧಿಕಾರ
  • ರಾಜ್ಯ ಸಕ್ಷಮ ಪ್ರಾಧಿಕಾರ
  • ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಹೆಣ್ಣು ಮಕ್ಕಳ ಏಳಿಗೆಗೆ ರಾಜ್ಯ ಸರ್ಕಾರದ ಯೋಜನೆಗಳು
ಶಿಷ್ಯವೇತನ:
ಹಾಜರಾತಿ ಶಿಷ್ಯವೇತನ:
ನಮ್ಮ ಮಗಳು ನಮ್ಮ ಶಕ್ತಿ-
ಬಾಲಿಕಾ ಸಮೃದ್ಧಿ ಯೋಜನೆ-
ಸಮಗ್ರ ಶಿಶು ಅಭಿವೃದ್ಧಿ ಯೋಜನೆ-
ಕೇಂದ್ರ ಸರ್ಕಾರದ ಯೋಜನೆ
(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)
-ಮೈನಾಶ್ರೀ.ಸಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT