ಬಹರೈನ್ ಶಾಲೆ 
ವಿದೇಶ

ಹೀಗೂ ಪೀಡಿಸ್ತವೆ ಕೆಲವು ಶಾಲೆಗಳು!

ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆ...

ದುಬೈ: ಶಾಲೆ ನಡೆಸುವವರು ದುಡ್ಡಿನ ಹಿಂದೆ ಬಿದ್ದು ಮಾನವೀಯತೆ, ಅಂತಃಕರಣ ಕಳೆದು ಕೊಂಡಿರುವ ಘಟನೆಯಿದು.
ಬಹರೈನ್ ಮೂಲದ ಭಾರತೀಯ ಶಾಲೆಯೊಂದು ವಿದ್ಯಾರ್ಥಿನಿಯೊಬ್ಬಳ ಪೋಷಕರಿಗೆ ಆಕೆಯ ವಾರ್ಷಿಕ ಶುಲ್ಕ ಬಾಕಿಯನ್ನು ಕೂಡಲೇ ಪಾವತಿಸುವಂತೆ ಒತ್ತಡ ಹೇರಿದೆ. ದುರಂತವೆಂದರೆ ಆ ವಿದ್ಯಾರ್ಥಿನಿ ತೀರಿಕೊಂಡು ಆರು ತಿಂಗಳು ಕಳೆದಿವೆ!

ಹೌದು. ಅಭಿಯಾ ಶ್ರೇಯಾ ಎಂಬ ವಿದ್ಯಾರ್ಥಿನಿ ಚಿಕನ್‍ಪಾಕ್ಸ್‍ಗೆ ತುತ್ತಾಗಿ ಜನವರಿಯಲ್ಲಿ ಸಾವಿಗೀಡಾಗಿದ್ದಳು. ಶಾಲೆಗೆ ಪೋಷಕರು ಸುದ್ದಿ ತಿಳಿಸಿ, ಆಕೆಯ ಹೆಸರನ್ನು ಶಾಲಾ ಪಟ್ಟಿಯಿಂದ ಹೊರಗಿಡಲು ಕೋರಿದ್ದರು. ಆದರೆ ಶುಲ್ಕ ಭರಿಸಬೇಕೆಂದು ಶಾಲೆಯಿಂದ ಪದೇಪದೆ ಒತ್ತಡ ಕರೆಗಳು ಬರುತ್ತಲೇ ಇದ್ದವು.

ಮಗಳ ಸಾವಿಂದ ಜರ್ಜರಿತರಾಗಿದ್ದ ತಾಯಿ ಶೈನಿ ಇದರಿಂದ ಖಿನ್ನತೆಗೆ ಒಳಗಾಗಿದ್ದರೆಂದು ಪತಿ ಜೋಸೆಫ್ ಚೆರಿಯನ್ ಗಲ್ಫ್ ನ್ಯೂಸ್‍ನೆದುರು ಅಳಲು ಹೇಳಿಕೊಂಡಿದ್ದಾರೆ. ನಂತರ ಶಾಲಾ ವ್ಯವಸ್ಥಾಪಕ ಮಂಡಳಿ ಕ್ಷಮೆ ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT