ಸಾಂದರ್ಭಿಕ ಚಿತ್ರ 
ವಿದೇಶ

30 ವರ್ಷ ಹಿಂದೆ ಕಳೆದು ಹೋಗಿದ್ದ ಪರ್ಸ್ ಮತ್ತೆ ಕೈಸೇರಿತು!

ಐದು ನಿಮಿಷದ ಹಿಂದೆ ಬಸ್ಸಲ್ಲೋ, ಅಂಗಡಿಯಲ್ಲೋ ಬಿಟ್ಟು ಹೋದ ಕೊಡೆ ಕೂಡ ನಮಗೆ ಮರಳಿ ಸಿಗುವುದಿಲ್ಲ. ಅಂಥದ್ದರಲ್ಲಿ...

ಲಂಡನ್: ಐದು ನಿಮಿಷದ ಹಿಂದೆ ಬಸ್ಸಲ್ಲೋ, ಅಂಗಡಿಯಲ್ಲೋ ಬಿಟ್ಟು ಹೋದ ಕೊಡೆ ಕೂಡ ನಮಗೆ ಮರಳಿ ಸಿಗುವುದಿಲ್ಲ. ಅಂಥದ್ದರಲ್ಲಿ ಮೂವತ್ತು ವರ್ಷಗಳ ಹಿಂದೆ ಕಳೆದು ಹೋದ ವಸ್ತುವೊಂದು ಮರಳಿ ಕೈ ಸೇರುತ್ತದೆ ಎಂದರೆ ನಂಬಲು ಸಾಧ್ಯವಾ? ಆದರೆ, ಬ್ರಿಟನ್‍ನ ವಾರ್ ವಿಕ್‍ಶೈರ್‍ನ ರೈತನ ಕಥೆ ಕೇಳಿದರೆ ನೀವು ಈ ರೀತಿ ಆಗಲೂ ಸಾಧ್ಯ ಎಂದು ನಂಬಲೇ ಬೇಕು.

ಮೂವತ್ತು ವರ್ಷದ ರೈಲು ಪ್ರಯಾಣದ ವೇಳೆ ಕಳೆದುಕೊಂಡಿದ್ದ ಪರ್ಸ್‍ವೊಂದು ಈಗ ಮರಳಿ ಅವರ ಕೈಸೇರಿದೆ. ನಾರ್ಥ್‍ನಾರ್ ಫೋಲ್ಕ್ ರೈಲಿನ ಸೀಟಿನ ಮೂಲೆಯಲ್ಲಿ ಈ ಪರ್ಸ್ ಸಿಕ್ಕಿಹಾಕಿಕೊಂಡಿತ್ತಂತೆ. ಯಾವುದೋ ಕೆಲಸದ ವೇಳೆ ಈಗ ನಿವೃತ್ತರಾಗಿರುವ ರೈಲ್ವೆ ಚಾಲಕ ಮೈಕಲ್ ಮೆಸ್ಸೆ(70) ಅವರ ಗಮನಕ್ಕೆ ಬಂದಿದೆ. ಕುತೂಹಲಗೊಂಡ ಮೆಸ್ಸೆ ಅವರು ಈ ಪರ್ಸ್‍ನ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯವನ್ನು ಡಿಟೆಕ್ಟಿವ್ ವೊಬ್ಬರಿಗೆ ವಹಿಸಿದ್ದರು.

ಮನಸ್ಸು ಮಾಡಿದ್ದರೆ ಮೆಸ್ಸೆ ಅವರು ಇದನ್ನು ಕಸದಬುಟ್ಟಿಗೆ ಎಸೆದುಬಿಡಬಹುದಿತ್ತು. ಯಾಕೆಂದರೆ ಈ ಪರ್ಸ್‍ನಲ್ಲಿದ್ದದ್ದು ಕೇವಲ ಒಂದು ಪೌಂಡ್ ನ ನೋಟು, ಕೆಲವು ಚಿಲ್ಲರೆ ಹಾಗೂ ಒಂದಷ್ಟು ದಾಖಲೆಪತ್ರಗಳು ಮಾತ್ರ. ಒಂದು ದಾಖಲೆಪತ್ರದಲ್ಲಿ ಡೆರೆಕ್ ಬಿ.ಗ್ಯಾಂಬಲ್ ಹೆಸರಿತ್ತು. ಅದು ಪರ್ಸ್‍ನ ಮಾಲಕ ಗ್ಯಾಂಬಲ್ ಅವರ ಹಳೆಯ(ವಾರ್‍ವಿಕ್‍ಶೈರ್) ವಿಳಾಸವಾಗಿತ್ತು.

ಈ ವಿಳಾಸವನ್ನು ಹುಡುಕಿಕೊಂಡು ಹೊರಟ ಡಿಟೆಕ್ಟಿವ್ ಗೆ ಗ್ಯಾಂಬಲ್ ಪುತ್ರ ನಾರ್ಥ್‍ಹ್ಯಾಂಪ್ಟನ್‍ನಲ್ಲಿರುವುದು ಗೊತ್ತಾಗಿದೆ. ಈ ಮೂಲಕ ಈ ಪರ್ಸ್ ಅನ್ನು ಗ್ಯಾಂಬಲ್ ಅವರಿಗೆ ತಲುಪಿಸಲಾಯಿತು. ಈ ಪರ್ಸ್ ಕಳೆದುಕೊಂಡಿದ್ದಾಗ ಗ್ಯಾಂಬಲ್ ಅವರಿಗೆ 30ರ ಹರೆಯ. ನಮಗೆ ಐದು ವರ್ಷದ ಹಿಂದೆ ನೀವು ಕೊಡೆ ಕಳೆದುಕೊಂಡಿದ್ದೀರಾ ಎಂದು ಕೇಳಿದರೇ ನೆನಪಿಗೆ ಬರುವುದಿಲ್ಲ.

ಅಂಥದ್ದರಲ್ಲಿ ಮೂವತ್ತು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಪರ್ಸ್ ಏಕಾಏಕಿ ಮತ್ತೆ ನಿಮ್ಮ ಕೈ ಸೇರಿದಾಗ ಒಂದರೆಕ್ಷಣ ಗೊಂದಲ ಕಾಡಿಬಿಡುತ್ತದೆ. ಗ್ಯಾಂಬಲ್ ಅವರಿಗೂ ಈ ಪರ್ಸ್ ಕಳೆದುಕೊಂಡ ನೆನಪೇ ಆಗಲಿಲ್ಲವಂತೆ. ಆದರೆ, ಈ ಪರ್ಸ್‍ನಿಂದಾಗಿ ಮೂವತ್ತು ವರ್ಷದ ಹಿಂದೆ ಅವರು ಕುಟುಂಬದ ಜತೆಗೆ ಕಳೆದ ಕ್ಷಣಗಳ ನೆನಪು ಮತ್ತೆ ತಾಜಾ ಆದವು ಎನ್ನುತ್ತಾರೆ ಗ್ಯಾಂಬಲ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT