ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು ತಿಂದ ಘಟನೆ (ಸಂಗ್ರಹ ಚಿತ್ರ) 
ವಿದೇಶ

ಸರ್ಬಿಯಾ ಪ್ರಧಾನಿಗೆ ಕಲ್ಲೇಟು

ಇಪ್ಪತ್ತು ವರ್ಷಗಳ ಹಿಂದಿನ ಬೋಸ್ನಿಯಾ ಮುಸ್ಲಿಮರ ಮಾರಣಹೋಮದ ಆಕ್ರೋಶಕ್ಕೆ ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು...

-20 ವರ್ಷಗಳ ಹಿಂದಿನ ಮಾರಣಹೋಮದ ಸ್ಮರಣೆ ಕಾರ್ಯಕ್ರಮದಲ್ಲಿ ಆಕ್ರೋಶ

ಸ್ರೆಬ್ರೆನಿಕಾ: ಇಪ್ಪತ್ತು ವರ್ಷಗಳ ಹಿಂದಿನ ಬೋಸ್ನಿಯಾ ಮುಸ್ಲಿಮರ ಮಾರಣಹೋಮದ ಆಕ್ರೋಶಕ್ಕೆ ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು ತಿಂದ ಘಟನೆ ಶನಿವಾರ ನಡೆದಿದೆ. ಯುಗೊಸ್ಲಾವಿಯಾದ ವಿಭಜನೆ ವೇಳೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮಹಿಳೆಯರು, ಮಕ್ಕಳು ಎನ್ನದೆ ಎಂಟು ಸಾವಿರಕ್ಕೂ ಹೆಚ್ಚು ಸ್ರೆಬ್ರೇನಿಕಾ ಮುಸ್ಲಿಮರನ್ನು ಬೋಸ್ನಿಯನ್ ಸರ್ಬ್ ಸೈನಿಕರು ಹತ್ಯೆ ಮಾಡಿದ್ದರು. ಆ ವೇಳೆ ಸರ್ಬಿಯಾ ಬೋಸ್ನಿಯನ್ ಸರ್ಬ್‍ಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ವೇಳೆ ಬೋಸ್ನಿಯನ್ ಸರ್ಬ್ ಸೈನಿಕರು ನಡೆಸಿದ ಮಾರಣಹೋಮದ 20ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸ್ರೆಬ್ರೇನಿಕಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅವರು ಸ್ಮಾರಕದ ಮುಂದೆ ಹೂಗುಚ್ಛ ಇಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಏಕಾಏಕಿ ಪ್ರಧಾನಿ ಮೇಲೆ ಕಲ್ಲು, ಬಾಟಲಿಗಳನ್ನು ಎಸೆಯಲು ಆರಂಭಿಸಿದರು. ಆಗ ಅನಿವಾರ್ಯವಾಗಿ ಪ್ರಧಾನಿ ಅವರು ತಮ್ಮ ಅಂಗರಕ್ಷಕರ ಹಿಂದೆ ಮರೆಯಾಗಿ ನಿಲ್ಲಬೇಕಾಯಿತು. ಈ ವೇಳೆ ಸಾರ್ವಜನಿಕರು ಎಸೆದ ಕಲ್ಲೊಂದು ಪ್ರಧಾನಿ ಅವರ ತಲೆಗೂ ತಾಗಿದೆ. ಅವರ ಕನ್ನಡ ಕೂಡ ಒಡೆದು ಹೋಗಿದೆ ಎನ್ನಲಾಗಿದೆ. ಸರ್ಬಿಯಾ ಹಾಗೂ ಬೋಸ್ನಿಯನ್ ಸರ್ಬ್ ರಾಜಕಾರಣಿಗಳು ಈ ಜನಾಂಗೀಯ ಹತ್ಯೆ ಯನ್ನು ತಳ್ಳಿಹಾಕುತ್ತಲೇ ಬಂದಿದ್ದರು. ಆದರೆ, ಈ ಘಟನೆಗೆ ಸಂಬಂಧಿಸಿ ಎರಡು ಅಂತಾರಾಷ್ಟ್ರೀಯ ನ್ಯಾಯಮಂಡಳಿಗಳು 1990 ದಶಕದಲ್ಲಿ ನಡೆದ ಹತ್ಯೆಯನ್ನು ಮಾರಣಹೋಮ ಎಂದು ಕರೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT