ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ 
ವಿದೇಶ

ಕಾಶ್ಮೀರ ಒಳಗೊಂಡರೆ ಮಾತ್ರ ಭಾರತದೊಂದಿಗೆ ಚರ್ಚೆ: ಸರ್ತಜ್ ಅಜೀಜ್

ಚರ್ಚೆಯ ವಿಷಯದ ಭಾಗವಾಗಿ ಕಾಶ್ಮೀರವನ್ನು ಒಳಗೊಂಡರೆ ಮಾತ್ರ ಭಾರತದೊಂದಿದೆ ಮಾತುಕತೆ ನಡೆಸಲು ಸಾಧ್ಯ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ

ಇಸ್ಲಾಮಾಬಾದ್: ಚರ್ಚೆಯ ವಿಷಯದ ಭಾಗವಾಗಿ ಕಾಶ್ಮೀರವನ್ನು ಒಳಗೊಂಡರೆ ಮಾತ್ರ ಭಾರತದೊಂದಿದೆ ಮಾತುಕತೆ ನಡೆಸಲು ಸಾಧ್ಯ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ ಮಂಗಳವಾರ ಹೇಳಿದ್ದಾರೆ.

ಕಾಶ್ಮೀರವನ್ನು ಒಳಗೊಂಡಂತೆ ಚರ್ಚಿಸಲು ಉಳಿದಿರುವ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ಇಸ್ಲಾಮಾಬಾದ್ ನಿಲುವನ್ನು ಇಡಿ ವಿಶ್ವವೇ ಒಪ್ಪಿಕೊಂಡಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ, ಭಾರತಕ್ಕೆ ಬೇಕಿರುವ ಅಪರಾಧಿ ದಾವುದ್ ಇಬ್ರಾಹಿಂ ಅಡಗಿದ್ದಾನೆ ಎಂಬ ಆರೋಪವನ್ನು ಸರ್ತಜ್ ತಳ್ಳಿಹಾಕಿದ್ದು, ಇದಕ್ಕೆ ದಿಟ್ಟ ಉತ್ತರ ನೀಡಲಾಗುವುದು ಎಂದಿದ್ದಾರೆ,

ಭಾರತ ಗಡಿ ಭದ್ರತಾ ಪಡೆಯ ಕಮ್ಯಾಂಡರ್ ಮತ್ತು ಪಾಕಿಸ್ತಾನ ರೇಂಜರ್ಸ್ ಅಧ್ಯಕ್ಷರ ನಡುವೆ ಬುಧವಾರ ನವದೆಹಲಿಯಲ್ಲಿ ಸಭೆ ನಡೆಯಲಿದ್ದು, ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಗ್ನತೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಲಹೆಗಾರ ಹೇಳಿದ್ದಾರೆ.

೨೦೦೩ ರ ಕನವಿರಾಮ ಒಪ್ಪಂದವನ್ನು ಜಾರಿ ಮಾಡುವ ವಿಷಯವನ್ನು ಸಭೆಯಲ್ಲಿ ಎತ್ತಲಾಗುವುದು ಎಂದು ಸಲಹೆಗಾರ ತಿಳಿಸಿದ್ದು, ಮೊದಲನೆಯ ದಿನದಿಂದಲೂ ಭಾರತ ಸರ್ಕರಾದ ನೀತಿಗಳು ಪಾಕಿಸ್ತಾನಿ ವಿರೋಧಿಯಾಗಿವೆ ಎಂದಿದ್ದಾರೆ ಸರ್ತಜ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT