ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಬ್ರಾನ್ಸನ್ (ವರ್ಜಿನ್.ಕಾಮ್ ಚಿತ್ರ) 
ವಿದೇಶ

ಅಪಘಾತ; ಖ್ಯಾತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅಪಾಯದಿಂದ ಪಾರು

ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಹಾಗೂ ವರ್ಜಿನ್ ಏರ್ ವೇಸ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಿಂಗ್ ಸ್ಟನ್: ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಹಾಗೂ ವರ್ಜಿನ್ ಏರ್ ವೇಸ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೌಟುಂಬಿಕ ಕಾರ್ಯಕ್ರಮ ನಿಮಿತ್ತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ರಿಚರ್ಡ್ ಬ್ರಾನ್ಸನ್ ತಮ್ಮ ಮಕ್ಕಳೊಂದಿಗೆ ಸೈಕ್ಲಿಂಗ್ ತೆರಳಿದ್ದು, ಈ ವೇಳೆ ವರ್ಜಿನ್ ಗೋರ್ಡಾ ದ್ವೀಪದಲ್ಲಿ ಸೈಕಲ್  ಚಾಲನೆ ಮಾಡುತ್ತಿದ್ದಾಗ ಬ್ರಾನ್ಸನ್ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ ಬ್ರಾನ್ಸನ್ ತಮ್ಮ ಮಕ್ಕಳಾದ ಹೋಲಿ ಹಾಗೂ ಸ್ಯಾಮ್ ರೊಂದಿಗೆ ವರ್ಜಿನ್ ಗೋರ್ಡಾ ದ್ವೀಪಕ್ಕೆ  ಸೈಕ್ಲಿಂಗ್ ತೆರಳಿದ್ದು, ಈ ವೇಳೆ ರಸ್ತೆ ಉಬ್ಬಿಗೆ ಡಿಕ್ಕಿ ಹೊಡೆದ ಬ್ರಾನ್ಸನ್ ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಬಿದ್ದಿದ್ದಾರೆ.

ಈ ವೇಳೆ ಪ್ರಪಾತದ ಕೆಳಗೆ ಇದ್ದ ರಸ್ತೆ ಮೇಲೆ ಬ್ರಾನ್ಸನ್ ಬಿದ್ದಿದ್ದು, ಅವರ ಮುಖ, ಬುಜ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಪೆಟ್ಟುಗಳಾಗಿವೆ. ಸೈಕ್ಲಿಂಗ್ ವೇಳೆ ಬ್ರಾನ್ಸನ್ ತಲೆಗೆ ಹಲ್ಮೆಟ್  ಧರಿಸಿದ್ದರಿಂದ ಅವರ ತಲೆಗೆ ಬೀಳಬೇಕಿದ್ದ ಪೆಟ್ಟು ಹೆಲ್ಮೆಟ್ ಗೆ ಬಿದ್ದಿದೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಸ್ವತಃ ಬ್ರಾನ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, "ನಾನು ಸತ್ತೇ ಹೋಗುತ್ತೇನೆ ಎಂದು ತಿಳಿದಿದ್ದೆ. ಸೈಕ್ಲಿಂಗ್ ವೇಳೆ ಪ್ರಪಾತಕ್ಕ ಬಿದ್ದಾಗ ನನ್ನ ಇಡೀ ಜೀವನ  ಒಂದು ಕ್ಷಣ ನನ್ನ ಕಣ್ಣ ಮುಂದೆ ಬಂತು. ಪ್ರಪಾತಕ್ಕೆ ಬಿದ್ದಾಗ ನನ್ನ ಸೈಕಲ್ ಕೂಡ ಕಾಣದಹಾಗೆ ಮಾಯವಾಯಿತು. ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ. ನನ್ನ ಕುತ್ತಿಗೆ, ಗಡ್ಡ ಹಾಗೂ  ಬುಜದಲ್ಲಿ ಗಂಭೀರಗಾಯಗಳಾಗಿವೆ ಎಂದು ಬ್ರಾನ್ಸನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT