ಶಸ್ತ್ರಚಿಕಿತ್ಸೆಗೆ ಮುನ್ನ ಸಯಾಮಿ ಅವಳಿಗಳಾದ ಎವಾ ಮತ್ತು ಎರಿಕಾ 
ವಿದೇಶ

ಶಸ್ತ್ರ ಚಿಕಿತ್ಸೆ ನಂತರ ಬೇರ್ಪಟ್ಟ ಸಯಾಮಿ ಅವಳಿಗಳ ಮೊದಲ ಭೇಟಿ

ಕ್ಯಾಲಿಫೋರ್ನಿಯಾದ ಸಯಾಮಿ ಅವಳಿಗಳಿಗೆ ಕಳೆದ ವಾರ ಸತತ 17 ಗಂಟೆಗಳ ಶಸ್ತ್ರ ಚಿಕಿತ್ಸೆ...

ಪಲೊ ಅಲ್ಟೊ: ಕ್ಯಾಲಿಫೋರ್ನಿಯಾದ ಸಯಾಮಿ ಅವಳಿಗಳಿಗೆ ಕಳೆದ ವಾರ ಸತತ 17 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಇದೀಗ ಕುಟುಂಬದವರ ಜೊತೆ ಸೇರಿಸಲಾಗಿದೆ.
ಇವಾ ಮತ್ತು ಸಂಡೊವಲ್ ಪ್ರತ್ಯೇಕ ಬೆಡ್ ಗಳಲ್ಲಿ ಒಂದೇ ಕೊಠಡಿಯಲ್ಲಿ ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮೊನ್ನೆ ಸೋಮವಾರ ಮಕ್ಕಳ ಪೋಷಕರು ಮತ್ತು ತೀವ್ರ ನಿಗಾ ಘಟಕದ ಸಿಬ್ಬಂದಿ ಜಾಗ್ರತೆಯಿಂದ ಎರಿಕಾಳನ್ನು ಎತ್ತಿಕೊಂಡು ಹೋಗಿ ಇವಾ ಬೆಡ್ ನಲ್ಲಿ ಕೂರಿಸಿ ಹಲೋ ಹೇಳಿಸಿದರು ಎಂದು ಲುಸಿಲೆ ಪಕಾರ್ಡ್ ಮಕ್ಕಳ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇವರಿಬ್ಬರನ್ನು ಡಿಸೆಂಬರ್ 6ರಂದು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಯಿತು.
ಇಷ್ಟು ದೇಹ ದೇಹವೊಂದೇ ಮುಖ ಎರಡು ಹೊಂದಿದ್ದ ಮಕ್ಕಳನ್ನು ಬೇರೆ ಬೇರೆಯಾಗಿ ನೋಡಲು ಖುಷಿಯಾಗುತ್ತದೆ ಎನ್ನುತ್ತಾರೆ ಅವಳಿ ಮಕ್ಕಳ ತಾಯಿ ಐದಾ ಸಂಡೊವಲ್.
ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಎರಿಕಾಳನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ.ಮೇಘನಾ ಪಟೇಲ್, ಇಬ್ಬರೂ ಆರೋಗ್ಯವಾಗಿದ್ದಾರೆ.ಅವರಿಗೆ ಯಾವುದೇ ಸಂಕೀರ್ಣ ಖಾಯಿಲೆಗಳಿರಲಿಲ್ಲ ಎಂದಿದ್ದಾರೆ.
ಈ ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಮುನ್ನ ಮೂತ್ರಕೋಶ, ಯಕೃತ್ತು, ಜೀರ್ಣ ವ್ಯವಸ್ಥೆ ಮತ್ತು ಮೂರನೇ ಕಾಲುಗಳನ್ನು ಹಂಚಿಕೊಂಡಿದ್ದರು.ಪ್ರತಿಯೊಂದು ಅಂಗಾಂಗಳ ಒಂದೊಂದು ಭಾಗವನ್ನು ಇಬ್ಬರೂ ಹೊಂದಿದ್ದರು. 
ಎರಡು ವರ್ಷ ಪ್ರಾಯದ ಈ ಮಕ್ಕಳು ವೆಂಟಿಲೇಟರ್ ಇಲ್ಲದೆಯೇ ಉಸಿರಾಡುತ್ತಿದ್ದಾರೆ, ಇನ್ನೊಂದು ವಾರದಲ್ಲಿ ತೀವ್ರ ನಿಗಾ ಘಟಕದಿಂದ ಹೊರಬರಬಹುದು ಎಂದು ವೈದ್ಯರು ಹೇಳುತ್ತಾರೆ.
ಸಯಾಮಿ ಅವಳಿಗಳು ಹುಟ್ಟುವುದು ವಿರಳವಾಗಿದ್ದು ಪ್ರತಿ 2 ಲಕ್ಷ ಮಕ್ಕಳಿಗೊಬ್ಬರು ಹುಟ್ಟುತ್ತಾರೆ. ಶೇಕಡಾ 50ರಷ್ಟು ಮಕ್ಕಳು ಹುಟ್ಟುವಾಗಲೇ ಸಾಯುತ್ತಿದ್ದು, ಶೇಕಡಾ 35ರಷ್ಟು ಮಕ್ಕಳು ಕೇವಲ ಒಂದು ದಿನ ಬದುಕುತ್ತಾರೆ ಎನ್ನುತ್ತಾರೆ ಮೇರಿಲ್ಯಾಂಡ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT