ವೆನಿಜುವೆಲಾದ 100 ಬೊಲಿವರ್‌ ನೋಟು (ಸಂಗ್ರಹ ಚಿತ್ರ) 
ವಿದೇಶ

ನೋಟು ನಿಷೇಧ ನಿರ್ಧಾರವನ್ನು ಜ.2 ವರೆಗೆ ಮುಂದೂಡಿದ ವೆನಿಜುವೆಲಾ!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಭಾರತದ ಮಾದರಿಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧಕ್ಕೆ ಮುಂದಾಗಿದ್ದ ವೆನಿಜುವೆಲಾ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ.

ಕಾರಾಕಸ್: ಕಪ್ಪು ಹಣಕ್ಕೆ ಕಡಿವಾಣ ಹಾಕಲು ಭಾರತದ ಮಾದರಿಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧಕ್ಕೆ ಮುಂದಾಗಿದ್ದ ವೆನಿಜುವೆಲಾ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ. 
ಗರಿಷ್ಠ ಮುಖಬೆಲೆಯಾದ 100 ಬೊಲಿವರ್‌ ನೋಟು ಚಲಾವಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ವೆನಿಜುವೆಲಾ ಜ.2 ರ ವರೆಗೆ ನೋಟು ನಿಷೇಧದ ನಿರ್ಧಾರವನ್ನು ಮುಂದೂಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಅಂತಾರಾಷ್ಟ್ರೀಯ ಅಭದ್ರತೆಗೆ ತಮ್ಮ ರಾಷ್ಟ್ರ ಬಲಿಪಶು ಆಗಿದ್ದು, ಹೊಸ 500 ಬೊಲಿವರ್‌ ನೋಟುಗಳು ಸರಿಯಾದ ಸಮಯಕ್ಕೆ ಬರುವುದನ್ನು ತಡೆಹಿಡಿಯಲಾಗಿದೆ ಎಂದು ನಿಕೋಲಸ್‌ ಮಡುರೊ ಹೇಳಿದ್ದಾರೆ. 
ಆರ್ಥಿಕ ಬಿಕ್ಕಟ್ಟು ಎದುರಾದ ಪರಿಣಾಮ ವೆನಿಜುವೆಲಾದಲ್ಲಿ ಅಂಗಡಿಗಳು ಬಂದ್ ಆಗಿದ್ದು, ಸಾರ್ವಜನಿಕರು ಬೇರೆ ದಾರಿ ಇಲ್ಲದೇ ವಹಿವಾಟು ನಡೆಸಲು ಕ್ರೆಡಿಟ್ ಕಾರ್ಡ್ ಅಥವ ಡೆಬಿಟ್ ಕಾರ್ಡ್ ಮೊರೆ ಹೋಗಬೇಕಾಯಿತು. ನೋಟು ನಿಷೇಧದಿಂದ ಉಂಟಾಗಿರುವ ನಗದು ಬಿಕ್ಕಟ್ಟಿನಿಂಡ ಹಲವು ಜನರು ಆಹಾರ ಸಿಗದೇ ಪರದಾಡುತ್ತಿದ್ದು, ನೋಟು ನಿಷೇಧಕ್ಕೆ ಆಕ್ರೋಶ ವ್ಯಕ್ತವಾದ ಪರಿಣಾಮ 6 ನಗರಗಳಲ್ಲಿ ಘರ್ಷಣೆ ನಡೆದಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ.  ಕಳ್ಳಸಾಗಣೆಗಳಿಗೆ ತುರ್ತಾಗಿ ಕಡಿವಾಣ ಹಾಕುವುದಕ್ಕೆ ನೋಟು ನಿಷೇಧದ ಕ್ರಮ ಅತ್ಯಗತ್ಯವಾಗಿತ್ತು ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT