ಯಜಿದಿ ಯುವತಿಯರ ಜೀವಂತ ಸುಟ್ಟ ಇಸಿಸ್ (ಸಂಗ್ರಹ ಚಿತ್ರ) 
ವಿದೇಶ

ಸೆಕ್ಸ್ ಗೆ ನಿರಾಕರಿಸಿದ 19 ಯಜಿದಿ ಯುವತಿಯರನ್ನು ಜೀವಂತ ಸುಟ್ಟ ಇಸಿಸ್!

ಇಸ್ಲಾಮಿಕ್ ಸ್ಟೇಟ್ ಉಗ್ರರ ಬೀಭತ್ಸ ಕೃತ್ಯಗಳು ಮುಂದುವರೆದಿದ್ದು, ಉಗ್ರಗಾಮಿಗಳೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ 19 ಯಜಿದಿ ಯುವತಿಯರನ್ನು ಸಾರ್ವಜನಿಕವಾಗಿ ಜೀವಂತ ಸುಟ್ಟು ಹಾಕಲಾಗಿದೆ...

ಮೊಸುಲ್: ಇಸ್ಲಾಮಿಕ್ ಸ್ಟೇಟ್ ಉಗ್ರರ ಬೀಭತ್ಸ ಕೃತ್ಯಗಳು ಮುಂದುವರೆದಿದ್ದು, ಉಗ್ರಗಾಮಿಗಳೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ 19 ಯಜಿದಿ ಯುವತಿಯರನ್ನು ಸಾರ್ವಜನಿಕವಾಗಿ ಜೀವಂತ ಸುಟ್ಟು ಹಾಕಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಠಿಯಲ್ಲಿರುವ ಮೊಸುಲ್ ನಗರದಲ್ಲಿ ಈ ಧಾರುಣ ಘಟನೆ ನಡೆದಿದ್ದು, ಕಬ್ಬಿಣದ ಪಂಜರದಳೊಗಿದ್ದ 19 ಮಂದಿ ಯುವತಿಯರ ಮೇಲೆ  ಸಾರ್ವಜನಿಕವಾಗಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.

ಕುರ್ದಿಷ್ ಮೂಲದ ಅರಾ ಪತ್ರಿಕೆಯ ಅಬ್ದುಲ್ಲಾ ಅಲ್ ಮಲಾ ಎಂಬ ಪತ್ರಕರ್ತ ಈ ಬಗ್ಗೆ ವರದಿ ಮಾಡಿದ್ದು, ಈ ಹಿಂದೆ ಮೊಸುಲ್ ನಗರಕ್ಕೆ ಉಗ್ರರು ಹೊತ್ತು ತಂದಿದ್ದ ಯಜಿದಿ ಯುವತಿಯರನ್ನು  ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲಾಗಿತ್ತು. ಉಗ್ರರೊಂದಿಗಿನ ಲೈಂಗಿಕತೆಗೆ ನಿರಾಕರಿಸಿದ ಯುವತಿಯರನ್ನು ಕಬ್ಬಿಣದ ಪಂಜರದೊಳಗೆ ಹಾಕಿ, ಮೊಸುಲ್ ನಗರದ ಪ್ರಮುಖ ವೃತ್ತಕ್ಕೆ  ಕರೆತಂದು ಸಾವಿರಾರು ಜನರ ಮುಂದೆಯೇ ಜೀವಂತವಾಗಿ ಸುಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಂತೆಯೇ ಉಗ್ರರ ಈ ಬೀಭತ್ಸ ಕೃತ್ಯಕ್ಕೆ ಅಲ್ಲಿ ನೆರೆದಿದ್ದ ನೂರಾರು ಮಂದಿ ಕೇವಲ ಮೂಕ ಪ್ರೇಕ್ಷಕರಾಗಿದ್ದರೇ ಹೊರತು ಯಾರೊಬ್ಬರೂ ಕೂಡ ಈ ಬಗ್ಗೆ ವಿರೋಧಿಸುವ ಗೋಜಿಗೇ ಹೋಗಲಿಲ್ಲ ಎಂದು ವರದಿಯಲ್ಲಿ ಪತ್ರಕರ್ತ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.

2014ರಲ್ಲಿ ವಾಯುವ್ಯ ಇರಾಕ್ ನ ಸಿಂಜಾರ್ ಪ್ರಾಂತ್ಯದಿಂದ ಇಸ್ಲಾಮಿಕ್ ಉಗ್ರರು ಸುಮಾರು 4000 ಕ್ಕೂ ಅಧಿಕ ಯಜಿದಿ ಮಹಿಳೆಯರನ್ನು ಅಪಹರಿಸಿದ್ದು, ಈ ಪೈಕಿ ನೂರಾರು ಮಹಿಳೆರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡು ಬಳಿಕ ಹರಾಜು ಮಾಡಲಾಗಿತ್ತು. ಅಂತೆಯೇ ಉಗ್ರರೊಂಗಿನ ಲೈಂಗಿಕ ಕ್ರಿಯೆ ವಿರೋಧಿಸಿದ ನೂರಾರು ಮಹಿಳೆಯರನ್ನು ಅಮಾನುಷವಾಗಿ ಕೊಲ್ಲಲಾಗಿದೆ. ಇಂದಿಗೂ ಸಾವಿರಾರು ಯುವತಿಯರು ಉಗ್ರರ ಕಪಿಮುಷ್ಠಿಯಲ್ಲಿದ್ದು, ಉಗ್ರರ ಹಿಡಿತದಲ್ಲಿರುವ ಮೊಸುಲ್ ನಗರದಲ್ಲಿ ಲೈಂಗಿಕ ಗುಲಾಮರಿಗಾಗಿಯೇ ದೊಡ್ಡ ಕ್ಯಾಂಪ್ ಅನ್ನು ನಿರ್ಮಿಸಲಾಗಿದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT