ಇರಾನ್ ಪಾದ್ರಿ ಸಯ್ಯದ್ ಯೂಸಫ್ ತಬತಬಿ 
ವಿದೇಶ

ಮಹಿಳೆಯರು ಅನೈತಿಕವಾಗಿ ನಡೆದುಕೊಂಡರೆ ನದಿ ಬತ್ತಿ ಹೋಗುತ್ತದೆ: ಇಸ್ಲಾಮಿಕ್ ಪಾದ್ರಿ

ಮಹಿಳೆಯರು ಅಸಭ್ಯವಾಗಿ ಉಡುಪು ಧರಿಸುವುದರಿಂದ ಸಮಾಜದಲ್ಲಿ ಅತ್ಯಾಚಾರ, ಅನೈತಿಕತೆ ನಡೆಯುತ್ತದೆ ಎಂದು...

ಟೆಹ್ರಾನ್: ಮಹಿಳೆಯರು ಅಸಭ್ಯವಾಗಿ ಉಡುಪು ಧರಿಸುವುದರಿಂದ ಸಮಾಜದಲ್ಲಿ ಅತ್ಯಾಚಾರ, ಅನೈತಿಕತೆ ನಡೆಯುತ್ತದೆ ಎಂದು ಹೇಳುವವರನ್ನು ಕೇಳಿದ್ದೇವೆ. ಆದರೆ ಮಹಿಳೆಯರು ಅಸಭ್ಯವಾಗಿ ಉಡುಗೆ ತೊಟ್ಟರೆ ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಇರಾನಿನ ಹಿರಿಯ ಪಾದ್ರಿಯೊಬ್ಬರು ಹೇಳಿದ್ದಾರೆ.

ಮಹಿಳೆಯರ ಅನೈತಿಕತೆಯಿಂದ ಇರಾನ್ ನ ಅತಿ ಉದ್ದವಾದ ಝಯಂದೆಹ್ ರದ್ ನದಿ ಬತ್ತಿ ಹೋಗುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ ಇರಾನ್ ಮಹಿಳೆಯರ ಉಡುಪು, ವರ್ತನೆ ಮೇಲೆ ಕಣ್ಣಿಡುವಂತೆ ಪೊಲೀಸರನ್ನು ಪಾದ್ರಿ ಸಯ್ಯದ್ ಯೂಸಫ್ ತಬತಾಬಿ-ನೇಜದ್ ಒತ್ತಾಯಿಸಿದ್ದಾರೆ.

ತಮ್ಮ ಧರ್ಮೋಪದೇಶದಲ್ಲಿ ಸಯ್ಯದ್, ಜಯಂದೇಹ್ ರದ್ ನದಿ ಈಗಾಗಲೇ ಸಾಕಷ್ಟು ಬರಿದಾಗಿದೆ. ಈ ನದಿಯ ಪಕ್ಕದಲ್ಲಿ ಮಹಿಳೆಯರು ಅನೈತಿಕವಾಗಿ ನಡೆದುಕೊಳ್ಳುತ್ತಿದ್ದ ಫೋಟೋ ನೋಡಿದೆ. ಇದನ್ನು ನೋಡಿದಾಗ ಅವರು ಯುರೋಪ್ ನಲ್ಲಿದ್ದಾರೇನೋ ಎನಿಸುತ್ತದೆ. ಇದರಿಂದ ನದಿ ಮತ್ತಷ್ಟು ಬರಿದುಹೋಗುತ್ತದೆ. ಇಂತಹ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇಸ್ಲಾಮಿಕ್ ಪದ್ಧತಿಗೆ ವಿರುದ್ಧವಾಗಿ ಅಲ್ಲಿನ ಮಹಿಳೆಯರು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆ ಪಾದ್ರಿ ಸಯ್ಯದ್ ಯೂಸಫ್ ತಬತಬಿ ಈ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆಗೆ ಇರಾನ್ ನ ರಾಷ್ಟ್ರೀಯ ರೆಸಿಸ್ಟೆನ್ಸ್ನ ಕೌನ್ಸಿಲ್ ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇರಾನ್ ನ ಪ್ರಭುತ್ವಾತ್ಮಕ ಆಡಳಿತವನ್ನು ಇದು ತೋರಿಸುತ್ತಿದ್ದು, ಉಗ್ರಗಾಮಿ ಸಂಘಟನೆ ಐಸಿಸ್ ಸಂಸ್ಕೃತಿಗೆ ಭಿನ್ನವಾಗಿಲ್ಲ ಎಂದು ಹೇಳಿದೆ.

ಮಹಿಳೆಯರು ಮನೆಯಲ್ಲಿರಬೇಕು, ಪುರುಷರು ಹೊರಗೆ ಹೋಗಿ ದುಡಿಯಬೇಕು ಮತ್ತು ದೇಶದ ವಸ್ತ್ರ ಸಂಹಿತೆಯನ್ನು ಪಾಲಿಸದ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಇರಾನ್ ನ ನಿಯಮಕ್ಕೆ ಈ ಹಿಂದೆ ಇಮಾಮ್ ವಿರೋಧ ವ್ಯಕ್ತಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT