ಸಾಂದರ್ಭಿಕ ಚಿತ್ರ 
ವಿದೇಶ

ಆದಷ್ಟು ಬೇಗ ಐರೋಪ್ಯ ಒಕ್ಕೂಟ ತೊರೆಯುವಂತೆ ಬ್ರಿಟನ್ ಗೆ ಇಯು ಮುಖ್ಯಸ್ಥರ ಸೂಚನೆ

ಬ್ರೆಕ್ಸಿಟ್ ಜನಮತ ಸಂಗ್ರಹದ ನಂತರ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ನಿರ್ಗಮಿತ ಬ್ರಿಟನ್...

ಲಂಡನ್: ಬ್ರೆಕ್ಸಿಟ್ ಜನಮತ ಸಂಗ್ರಹದ ನಂತರ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ನಿರ್ಗಮಿತ ಬ್ರಿಟನ್ ಪ್ರಧಾನಿ ಡೇವಿಡ್ಕೆ ಕೆಮರಾನ್ ಅವರು, ತಮ್ಮ ಮುಂದಿನ ಪ್ರಧಾನಿ ಒಕ್ಕೂಟದಿಂದ ಹೊರನಡೆಯುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಕೆಮರಾನ್ ಹೇಳಿಕೆಯನ್ನು ಒಪ್ಪದ ಯೂರೋಪಿಯನ್ ಒಕ್ಕೂಟ(ಇಯು)ದ ಮುಖ್ಯಸ್ಥರು ಆದಷ್ಟು ಬೇಗ ಒಕ್ಕೂಟದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭಿಸುವಂತೆ ಬ್ರಿಟನ್ ಗೆ ಸೂಚಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಇಯು ಅಧ್ಯಕ್ಷ ಡೋನಾಲ್ಡ್ ಟಸ್ಕ್, ಯೂರೋಪಿಯನ್ ಆಯೋಗದ ಮುಖ್ಯಸ್ಥ ಜೀನ್-ಕ್ಲೌಡ್ ಜಂಕರ್ ಹಾಗೂ ಇಯು ಸಂಸತ್ ನಾಯಕ ಮಾರ್ಟಿನ್ ಶುಲ್ಜ್ ಅವರು, ಬ್ರಿಟನ್ ಸರ್ಕಾರ ಬ್ರಿಟಿಷ್ ಜನತೆಯ ನಿರ್ಧಾರಕ್ಕೆ ಬದ್ಧವಾಗಿ ಆದಷ್ಟು ಬೇಗ ಒಕ್ಕೂಟ ತೊರೆಯಬೇಕು ಎಂದು ನಾವು ಬಯಸುತ್ತೇನೆ. ಇದೇ ವೇಳೆ ಇದು ತುಂಬಾ ನೋವಿನ ಪ್ರಕ್ರಿಯೆ ಎಂದು ಸಹ ವಿಷಾದ ವ್ಯಕ್ತಪಡಿಸಿದ್ದಾರೆ.
ಜನಮತಗಣನೆಯಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಅಕ್ಟೋಬರ್ ನಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಡೇವಿಡ್ ಕೆಮರಾನ್ ಅವರು ಘೋಷಿಸಿದ್ದಾರೆ. ಅಲ್ಲದೆ ನೂತನ ಪ್ರಧಾನಿ ಒಕ್ಕೂಟದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಹೊರಹೋಗುವ ಪರವಾಗಿ ಸುಮಾರು ಷೇ.51. 8ರಷ್ಟು ಮತಗಳು ಹಾಗೂ ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT