ದಾಳಿ ನಡೆದ ದೂತಾವಾಸ ಕಚೇರಿಯ ಸಮೀಪದ ಸ್ಥಳ 
ವಿದೇಶ

ಆಫ್ಘಾನಿಸ್ತಾನದ ಭಾರತೀಯ ದೂತವಾಸ ಕಚೇರಿ ಬಳಿ ಬಾಂಬ್ ಸ್ಫೋಟ: ನಾಲ್ವರು ಉಗ್ರರು ಸಾವು

ಪೂರ್ವ ಅಫ್ಘಾನಿಸ್ತಾನ ನಗರದ ಜಲಾಲಬಾದ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ...

ಜಲಾಲಾಬಾದ್: ಪೂರ್ವ ಅಫ್ಘಾನಿಸ್ತಾನ ನಗರದ ಜಲಲಬಾದ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ದಾಳಿ ನಡೆಸಿರುವ ಮತ್ತು ಭದ್ರತಾ ಪಡೆ ಯೋಧರು ಹಾಗೂ ಉಗ್ರಗಾಮಿಗಳು ಗುಂಡಿನ ಚಕಮಕಿ ನಡೆಸಿರುವ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಘಟನೆಯಲ್ಲಿ ನಾಲ್ವರು ಉಗ್ರಗಾಮಿಗಳು ಸಾವನ್ನಪ್ಪಿ ಮಗು ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ.

ನಮ್ಮ ದೇಶದ ರಾಯಭಾರಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಅಲ್ಲದೆ ಭಾರತ ಟಿಬೆಟಿಯನ್ ಗಡಿ ಪೊಲೀಸರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆ ಯೋಧರು ಉಗ್ರಗಾಮಿಗಳ ಜೊತೆ ಗುಂಡಿನ ದಾಳಿಯಲ್ಲಿ ನಿರತರಾಗಿದ್ದರು.
ಇದುವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಕಳೆದ ಜನವರಿಯಲ್ಲಿ ಉತ್ತರ ಆಫ್ಘನ್ ನ ಮಜರ್ -ಇ-ಶರೀಫ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಯು ದಾಳಿಗೊಳಗಾಗಿತ್ತು.

ದೂತವಾಸ ಕಚೇರಿಯ ಸಮೀಪವಿರುವ ಅಂಗಡಿ ಮಾಲೀಕ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ, ಕಚೇರಿಯ ಸುತ್ತಮುತ್ತ ಹಲವರು ಗಾಯಗೊಂಡು ಬಿದ್ದಿರುವುದನ್ನು ನೋಡಿದೆ. ತಮ್ಮ ಅಂಗಡಿಯ ಕಿಟಕಿಯಿಂದ ಬಾಂಬ್ ವೊಂದು ಸ್ಫೋಟಗೊಂಡ ಶಬ್ಧ ಕೇಳಿಸಿತು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT