ವ್ಯಾಟಿಕನ್ ಪಾದ್ರಿಯವರೊಂದಿಗೆ ಮದರ್ ತೆರೆಸಾ 
ವಿದೇಶ

ಮದರ್ ತೆರೆಸಾಗೆ ವ್ಯಾಟಿಕನ್ ನಿಂದ ಸಂತ ಪದವಿ ಪ್ರದಾನ

ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು...

ವ್ಯಾಟಿಕನ್: ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು ಮಂಗಳವಾರ ತಿಳಿಸಿದೆ. ಅವರು ಭಾರತದ ಕೋಲ್ಕತ್ತಾದಲ್ಲಿ ಬಡವರ ಪರವಾಗಿ ಕೆಲಸ ಮಾಡಿದ್ದಕ್ಕೆ ಈ ಗೌರವ ಸಿಗಲಿದೆ.
ಮದರ್ ತೆರೆಸಾ ಅವರು ನಿಧನಹೊಂದಿ ಸುಮಾರು ಎರಡು ದಶಕಗಳ ನಂತರ ಹಿರಿಯ ಪಾದ್ರಿಗಳ ಸಮಿತಿ ಅವರಿಗೆ ಅತ್ಯುನ್ನತ ಗೌರವ ನೀಡಿದೆ.

ಪೋಪ್ ಫ್ರಾನ್ಸಿಸ್ ಅವರು ತೀರ್ಪಿಗೆ ಅನುಮೋದನೆ ನೀಡಿ ಸಹಿ ಹಾಕಲಿದ್ದು, ಇದರ ಅಧಿಕೃತ ಘೋಷಣೆ ಸದ್ಯದಲ್ಲಿಯೇ ಬೃಹತ್ ಸಮಾರಂಭವೊಂದರಲ್ಲಿ ನಡೆಯಲಿದೆ.
ಸಾಧು ಸಂತರ ಪದವಿಗೆ ಐದು ಮಂದಿಯ ಹೆಸರನ್ನು ಸೂಚಿಸಲಾಗಿತ್ತು. ಅವರಲ್ಲಿ ಅಲ್ಬೇನಿಯನ್ ಸನ್ಯಾಸಿಗಳು ಮತ್ತು ಮಿಷನರಿಯೂ ಒಬ್ಬರಾಗಿದ್ದರು.

ಸಂತ ಪದವಿ ಘೋಷಣೆ ಈ ವರ್ಷ ಸೆಪ್ಟೆಂಬರ್ 4ರಂದು ಮದರ್ ತೆರೆಸಾ ನಿಧನ ಹೊಂದಿದ ವರ್ಷಾವಧಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗುತ್ತದೆ. ಅವರ ನೆನಪಿನಲ್ಲಿ ಚರ್ಚಿನ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಭಾರತದಲ್ಲಿ ನಡೆಸುವ ಯೋಜನೆ ಇತ್ತಾದರೂ ಕೊನೆ ಕ್ಷಣದ ಬದಲಾವಣೆ ನಂತರ ರೋಮ್ ನಲ್ಲಿ ನಡೆಯುವ ಸಾಧ್ಯತೆಯಿದೆ.
ವಿಶ್ವಾದ್ಯಂತ ತಮ್ಮ ಸಮಾಜ ಸೇವೆಯಿಂದ ಹೆಸರು ಗಳಿಸಿದ್ದ ಮದರ್ ತೆರೆಸಾ ಕೋಲ್ಕತ್ತಾದಲ್ಲಿ ಬಡವರು, ನಿರ್ಗತಿಕರು, ವೃದ್ಧರು, ರೋಗಪೀಡಿತರ ಆರೈಕೆ ಮಾಡಿದ್ದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!