ಅಲ್ ಖೈದಾ ವಶದಲ್ಲಿದ್ದ ಮಕುಲ್ಲಾ ನಗರ (ಎಎಫ್ ಪಿ ಚಿತ್ರ) 
ವಿದೇಶ

ಯೆಮೆನ್ ಆತ್ಮಾಹುತಿ ಬಾಂಬ್ ದಾಳಿಗೆ 25 ಪೊಲೀಸರ ಸಾವು

ಯೆಮೆನ್ ಪೊಲೀಸ್ ನೇಮಕಾತಿ ವಿರೋಧಿಸಿ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...

ಯೆಮೆನ್: ಯೆಮೆನ್ ಪೊಲೀಸ್ ನೇಮಕಾತಿ ವಿರೋಧಿಸಿ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಯೆಮೆನ್ ವ ಮುಕಲ್ಲಾದಲ್ಲಿ ಈ ದಾಳಿ ನಡೆದಿದ್ದು, ಸೇನಾ ನೆಲೆಯನ್ನೇ ನೇರವಾಗಿ ಗುರಿಯಾಗಿಸಿಕೊಂಡ ಉಗ್ರರು ಈ ಭೀಕರ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 25 ಪೊಲೀಸ್  ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಬಾಂಬ್ ಸ್ಫೋಟದಿಂದಾಗಿ 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಸ್ತುತ ಈ ಭೀಕರ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ನೂತನ ಯೆಮೆನ್ ಅಧ್ಯಕ್ಷ ಅಬ್ದ್ ರಬ್ಬು ಮಸ್ಸೂರ್ ಹಾದಿ ಅವರನ್ನು ಬೆಂಬಲಿಸಿದ ಸೇನೆ  ವಿರುದ್ಧ ನಡೆಸಿದ ದಾಳಿ ಇದಾಗಿದೆ ಎಂದು ಅದು ಹೇಳಿಕೊಂಡಿದೆ. ಇತ್ತೀಚೆಗಷ್ಟೇ ಯೆಮೆನ್​ಗೆ ವಾಪಾಸಾಗಿರುವ ಸೌದಿ ಸೇನೆ ಏಪ್ರಿಲ್ 24ರಂದು ಅಲ್​ಖೈದಾ ವಶದಿಂದ ಮುಕಲ್ಲಾವನ್ನು  ವಶಪಡಿಸಿಕೊಂಡು, ತನ್ನ ಬೆಂಬಲಿತ ಅಬ್ದ್ ರಬ್ಬು ಮಸ್ಸೂರ್ ಹಾದಿ ಅವರನ್ನು ಮತ್ತೆ ಯೆಮೆನ್ ಅಧ್ಯಕ್ಷರನ್ನಾಗಿಸಿತ್ತು.

ಅಲ್ಲದೆ ಯೆಮೆನ್ ಸೇನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಸಂಬಂಧ ಸ್ಥಳೀಯ ಉಗ್ರ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಇಂದು ನೇಮಕಾತಿ ಪ್ರಕ್ರಿಯೆ  ನಡೆಯುತ್ತಿದ್ದ ಸಂದರ್ಭದಲ್ಲಿಯೇ ಬಾಂಬ್ ಸ್ಫೋಟಗೊಂಡಿದೆ. ಈಗ್ಗೆ ಕೆಲವೇ ದಿನಗಳ ಹಿಂದಷ್ಟೇ ಸೇನಾ ನೆಲೆ ಸಮೀಪ ಮೂರು ಬಾಂಬ್ ದಾಳಿ ಸಂಭವಿಸಿತ್ತು. ದಾಳಿಯಲ್ಲಿ ಕನಿಷ್ಠ 15 ಸೇನಾ  ಸಿಬ್ಬಂದಿ ಸಾವಿಗೀಡಾಗಿದ್ದರು. ಮೂರು ದಾಳಿಗಳ ಪೈಕಿ ಒಂದು ದಾಳಿಯ ಹೊಣೆಯನ್ನು ಡಾಯಿಸ್ ತಾಕ್​ಫಿರಿ ಹೊತ್ತುಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT