ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ರಿಯೋ ಡಿ ಜನೈರೋದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿರುವುದು. 
ವಿದೇಶ

ಬ್ರಝಿಲ್ : 16 ವರ್ಷದ ಬಾಲಕಿ ಮೇಲೆ 30 ಮಂದಿಯಿಂದ ಅತ್ಯಾಚಾರ

ಹದಿನಾರರ ಹರೆಯದ ಬಾಲಕಿಗೆ ಬಲವಂತವಾಗಿ ಮಾದಕ ದ್ರವ್ಯ ತಿನ್ನಿಸಿ ಆಕೆಯನ್ನು ನಗ್ನವಾಗಿ ಮಲಗಿಸಿ 30ಕ್ಕೂ ...

ರಿಯೋ ಡಿ ಜನೈರೋ: ಹದಿನಾರರ ಹರೆಯದ ಬಾಲಕಿಗೆ ಬಲವಂತವಾಗಿ ಮಾದಕ ದ್ರವ್ಯ ತಿನ್ನಿಸಿ ಆಕೆಯನ್ನು ನಗ್ನವಾಗಿ ಮಲಗಿಸಿ 30ಕ್ಕೂ ಅಧಿಕ ಕಾಮಾಂಧರು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ತಮ್ಮ ಪೈಶಾಚಿಕ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆಘಾತಕಾರಿ ಘಟನೆ ಬ್ರೆಜಿಲ್ ನ ರಿಯೋ ಡಿ ಜನೈರೋ ದಲ್ಲಿ ನಡೆದಿದ್ದು ಅಲ್ಲಿನ  ಮಹಿಳೆಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಈ ಘಟನೆ ಮೇ 21ರಂದು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸಂತ್ರಸ್ತೆಗೆ ನ್ಯಾಯ ಕೊಡಿಸುವುದಾಗಿ ಬ್ರೆಜಿಲ್ ನ ಕಾನೂನು ಸಚಿವ ಅಲೆಕ್ಸಾಂಡರ್ ಡಿ ಮೊರೈಸ್ ಸುದ್ದಿಗೋಷ್ಟಿಯಲ್ಲಿ ಭರವಸೆ ನೀಡಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಬ್ರೆಜಿಲ್ ನ ಹಂಗಾಮಿ ಅಧ್ಯಕ್ಷ ಮೈಕೆಲ್ ಟೆಮರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ 21ನೇ ಶತಮಾನದಲ್ಲಿ ಕೂಡ ನಾವು ಇಂತಹ ಭೀಕರ ಕೃತ್ಯದ ನಡುವೆ ಬದುಕಬೇಕಾದ ಪರಿಸ್ಥಿತಿಯಿದೆ. ರಿಯೋ ಡಿ ಜನೈರೋದಲ್ಲಿ ನಡೆದ ಈ ಕೃತ್ಯದ ಬಗ್ಗೆ ತೀವ್ರವಾಗಿ ಖಂಡಿಸುತ್ತೇನೆ ಎಂದು ಮೈಕೆಲ್ ಟ್ವಿಟ್ಟರ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಗ್ಯಾಂಗ್‌ ರೇಪ್‌ಗೆ ಒಳಗಾದ ಬಾಲಕಿಯು ಹಾಸಿಗೆಯಲ್ಲಿ ನಗ್ನಳಾಗಿ ಬಿದ್ದಿರುವುದು ಮತ್ತು ಕಾಮಾಂಧನೋರ್ವ " ಈ ಬಾಲಕಿಯನ್ನು 30ಕ್ಕೂ ಹೆಚ್ಚಿನ ನನ್ನ ಸಂಗಾತಿಗಳು ರೇಪ್‌ ಮಾಡಿದ್ದಾರೆ' ಎಂದು ಅಟ್ಟಹಾಸ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಕಳೆದ ವಾರ ವೈರಲ್‌ ಆಗಿತ್ತು. ಈ ಆಘಾತಕಾರಿ ವಿಡಿಯೋ ವೀಕ್ಷಿಸಿದ ಸಾಮಾಜಿಕ ಜಾಲ ತಾಣ ಬಳಕೆದಾರರಲ್ಲಿ ಇದುತೀವ್ರವಾದ ಆಕ್ರೋಶ, ಜುಗುಪ್ಸೆ, ಹತಾಶೆ, ಭೀತಿಯನ್ನು ಹುಟ್ಟಿಸಿತ್ತು. ಇದಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.

ಈ ವರ್ಷ ಆಗಸ್ಟ್‌ನಲ್ಲಿ ಇಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದ್ದು ಈ ಬಗೆಯ ಅಘಾತಕಾರಿ ಘಟನೆಯಿಂದ ಜನರಲ್ಲಿ ಭೀತಿ ಉಂಟಾಗಿದೆ.

ಸಾಮೂಹಿಕ ಅತ್ಯಾಚಾರ ವಿಡಿಯೋದಲ್ಲಿ ಗುರುತಿಸಲ್ಪಟ್ಟಿರುವ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಅತ್ಯಾಚಾರ ವಿಡಿಯೋ ಹಾಕಿದವರಿಗಾಗಿಯೂ ಹುಡುಕಾಟ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥ ಫರ್ನಾಂಡೋ ವೆಲೊಸೋ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT