ಸಾಂದರ್ಭಿಕ ಚಿತ್ರ 
ವಿದೇಶ

73 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜಲಂತರ್ಗಾಮಿ ನೌಕೆ ಪತ್ತೆ

ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ಬ್ರಿಟನ್‌ನ ರಾಯಲ್‌ ನೇವಿಯ ಜಲಾಂತರ್ಗಾಮಿಯೊಂದು ಇದೀಗ ಇಟಲಿ ಕರಾವಳಿಯ ದೂರ ಸಮುದ್ರದಾಳದಲ್ಲಿ ...

ಲಂಡನ್‌: ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ಬ್ರಿಟನ್‌ನ ರಾಯಲ್‌ ನೇವಿಯ ಜಲಾಂತರ್ಗಾಮಿಯೊಂದು ಇದೀಗ ಇಟಲಿ ಕರಾವಳಿಯ ದೂರ ಸಮುದ್ರದಾಳದಲ್ಲಿ ಪತ್ತೆಯಾಗಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳಿಂದ ಸಮುದ್ರದಾಳದಲ್ಲಿ ಹುಗಿಯಲ್ಪಟ್ಟಿದ್ದ ನೆಲ ಬಾಂಬ್‌ ಸ್ಫೋಟಗೊಂಡು ನಾಶವಾಯಿತೆಂದು ಭಾವಿಸಲಾಗಿದ್ದ ಈ ಜಲಾಂತರ್ಗಾಮಿಯೊಳಗೆ ಆ ಸಂದರ್ಭದಲ್ಲಿ ಇದ್ದ 71 ಮಂದಿ ಚಾಲಕ ಸಿಬ್ಬಂದಿಯ ಮೃತ ದೇಹಗಳು ಕೂಡ ಯಥಾಸ್ಥಿತಿಯಲ್ಲಿ ಪತ್ತೆಯಾಗಿದೆ.

ಇಟಲಿಯ ಸಾರ್ಡಿನಿಯಾದ ಈಶಾನ್ಯ ಕರಾವಳಿಯಲ್ಲಿನ ಟ್ಯಾವೋಲಾರಾ ದ್ವೀಪಕ್ಕೆ ಸಮೀಪ, ಸುಮಾರು 100 ಮೀಟರ್‌ ಸಮುದ್ರದಾಳದಲ್ಲಿ ಶೋಧ ಕಾರ್ಯ ಕೈಗೊಂಡ ಮುಳುಗು ತಜ್ಞರ ತಂಡಕ್ಕೆ 1,290 ಟನ್‌ ಸಾಮರ್ಥ್ಯದ ಈ ಜಲಾಂತರ್ಗಾಮಿ ಈಚೆಗೆ ಪತ್ತೆಯಾಗಿದೆ.

1943ರ ಜನವರಿ 2ರಂದು ಬ್ರಿಟನ್‌ನ ಈ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ನಾಪತ್ತೆಯಾಗಿತ್ತು. ಓಲ್‌ಬಿಯಾ ಕೊಲ್ಲಿಯಲ್ಲಿನ ಸಾಗರದಾಳದಲ್ಲಿ ಶತ್ರು ಸೇನೆಗಳು ಹುಗಿದಿಟ್ಟಿದ್ದ ನೆಲ ಬಾಂಬ್‌ ಸ್ಫೋಟಕ್ಕೆ ಈ ಜಲಾಂತರ್ಗಾಮಿ ಧ್ವಂಸಗೊಂಡಿತ್ತೆಂದು ನಂಬಲಾಗಿತ್ತು.

ಸಾಗರದಾಳದಲ್ಲಿ ಈ ಜಲಾಂತರ್ಗಾಮಿ ಅಂದು ಹೇಗಿದ್ದಿತೋ ಹಾಗೆ, ಯಾವುದೇ ರೀತಿಯ ಹಾನಿಯನ್ನು ಕಾಣದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲಿ ಅಂದು ಮೃತಪಟ್ಟಿದ್ದ 71 ಯೋಧರ ಮೃತ ದೇಹಗಳು ಗೋಚರವಾಗಿವೆ.

ಎರಡನೇ ಮಹಾಯುದ್ಧ ಕಾಲದ ದಾಖಲೆಗಳಿಂದ ತಿಳಿದುಬರುವಂತೆ ಈ ನತದೃಷ್ಟ ಜಲಾಂತರ್ಗಾಮಿಯು 1942ರ ಡಿಸೆಂಬರ್‌ 28ರಂದು ಮಾಲ್ಟಾದಿಂದ ಹೊರಟಿತ್ತು. ಲಾ ಮ್ಯಾಡೆಲಿನಾ ಬಂದರಿನಲ್ಲಿ ಲಂಗರು ಹಾಕಲಿದ್ದ ಇಟಲಿಯ ಎರಡು ಸಮರ ನೌಕೆಗಳನ್ನು ನಾಶಪಡಿಸುವುದೇ ಬ್ರಿಟನ್‌ನ ಈ ಜಲಾಂರ್ಗಾಮಿಯ ಪ್ರಪ್ರಥಮ ಗುರಿಯಾಗಿತ್ತು.

ಆದರೆ ಡಿಸೆಂಬರ್‌ 31ರಂದು ತನ್ನ ಮೂಲ ನೆಲೆಗೆ ಸಂದೇಶವೊಂದನ್ನು ರವಾನಿಸಿದ ಬಳಿಕ ಈ ಬ್ರಿಟಿಷ್‌ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾಯಿತು. ಮಿಲಿಟರಿ ಅಧಿಕಾರಿಗಳು ಈ ಜಲಾಂತರ್ಗಾಮಿ ಸಾಗರದಾಳದಲ್ಲಿ ಮುಳುಗಿತೆಂದೇ ಭಾವಿಸಿದ್ದರು.

ಇದೀಗ 73 ವರ್ಷಗಳ ತರುವಾಯ ಪತ್ತೆಯಾಗಿರುವ ಈ ಬ್ರಿಟಿಷ್‌ ಜಲಾಂತರ್ಗಾಮಿಯ ಅವಶೇಷಗಳು ಅಚ್ಚರಿ ಹುಟ್ಟಿಸುವಷ್ಟು ಯಥಾಸ್ಥಿತಿಯಲ್ಲೇ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT