ಸಂಗ್ರಹ ಚಿತ್ರ 
ವಿದೇಶ

ಚೀನಾ ಸಮುದ್ರದಲ್ಲಿ ಅಮೆರಿಕ ಸೇನಾ ನೌಕೆ; ಪ್ರಚೋದನಾತ್ಮಕ ನಡೆ ಎಂದು ಚೀನಾ ಆಕ್ರೋಶ

ತೀವ್ರ ವಿವಾದಕ್ಕೀಡಾಗಿರುವ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ವಿರುದ್ಧ ಚೀನಾ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಪ್ರದೇಶದಲ್ಲಿ ಸಮರನೌಕೆಗಳನ್ನು ರವಾನೆ ಮಾಡುವ ಮೂಲಕ ಪ್ರಚೋದಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬೀಜಿಂಗ್: ತೀವ್ರ ವಿವಾದಕ್ಕೀಡಾಗಿರುವ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ವಿರುದ್ಧ ಚೀನಾ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಪ್ರದೇಶದಲ್ಲಿ  ಸಮರನೌಕೆಗಳನ್ನು ರವಾನೆ ಮಾಡುವ ಮೂಲಕ ಪ್ರಚೋದಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಚೀನಾ ಸೈನಿಕರ ಹಿಡಿತದಲ್ಲಿರುವ ವಿವಾದಾತ್ಮಕ ಚೀನಾ ಸಮುದ್ರದ ಪ್ಯಾರಾಸೆಲ್ ಐಲೆಂಡ್ ಬಳಿ ಅಮೆರಿಕ ದೇಶದ ಸಮರ ನೌಕೆಗಳು ಪ್ರವೇಶ ಮಾಡುತ್ತಿದ್ದು, ಚೀನಾ ಸೈನಿಕರ ಎಚ್ಚರಿಕೆ  ಹೊರತಾಗಿಯೂ ಗಡಿ ಬಿಟ್ಟು ತೆರಳುತ್ತಿಲ್ಲ ಎಂದು ಚೀನಾ ಆರೋಪಿಸಿದೆ. ಚೀನಾದ ಎರಡು ಸಮರನೌಕೆಗಳು ಅಮೆರಿಕ ಸಮರನೌಕೆಗೆ ಎಚ್ಚರಿಕೆ ನೀಡಿದ್ದು, ಇದರ ಹೊರತಾಗಿಯೂ ಸುಮಾರು  ಹೊತ್ತಿನವರೆಗೂ ಅಮೆರಿಕ ಸಮರ ನೌಕೆಗಳು ತೆರಳಲಿಲ್ಲ ಎಂದು ಚೀನಾ ಆರೋಪಿಸಿದೆ.

ಅಮೆರಿಕದ ಈ ನಡೆ ಪ್ರಚೋದನಾತ್ಮಕವಾಗಿದ್ದು, ವಿವಾದವನ್ನು ಭುಗಿಲೇಳಿಸುವ ಉದ್ದೇಶದಿಂದಲೇ ಅಮೆರಿಕ ತನ್ನ ಸಮರನೌಕೆಗಳನ್ನು ವಿವಾದಾತ್ಮಕ ಸಮುದ್ರ ಪ್ರದೇಶಕ್ಕೆ ಕಳುಹಿಸಿದೆ ಎಂದು ಬೀಜಿಂಗ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.

ಇನ್ನು ಪ್ರಸ್ತುತ ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಇದೇ ಪ್ಯಾರಾಸೆಲ್ ದ್ಪೀಪವನ್ನು ವಿಯೆಟ್ನಾಂ ಮತ್ತು ತೈವಾನ್ ದೇಶಗಳು ಕೂಡ ತಮ್ಮದೆಂದು ವಾದ ಮಾಡುತ್ತಿದ್ದು, ಇದೇ ಕಾರಣಕ್ಕೆ  ಚೀನಾ ದೇಶ ಈ ಭಾಗದಲ್ಲಿ ಹಲವು ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ.

ವಿವಾದಿತ ಗಡಿ ಪ್ರವೇಶಿಸಿಲ್ಲ: ಪೆಂಟಗನ್ ಮಾಹಿತಿ

ಇನ್ನು ಚೀನಾದ ಆರೋಪದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ, ತನ್ನ ಸಮರ ನೌಕೆ ಚೀನಾ ಸಮುದ್ರದಲ್ಲಿ ತೆರಳಿದ್ದು ನಿಜ. ಆದರೆ ಚೀನಾದ ವಿವಾದಿತ ಗಡಿ  ಸಮುದ್ರವನ್ನು ನೌಕೆ ಪ್ರವೇಶಿಸಿಲ್ಲ. ಬದಲಿಗೆ 12 ನಾಟಿಕಲ್ ಮೈಲು ದೂರದಲ್ಲೇ ನೌಕೆ ಹಾದುಹೋಗಿದೆ. ಇದು ಸೇನೆಯ ಸಾಮಾನ್ಯ ತರಬೇತಿಯಷ್ಟೇ ಎಂದು ಪೆಂಟಗನ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT