ಈಜಿಪ್ಟ್ ದೋಣಿ ದುರಂತ (ಸಂಗ್ರಹ ಚಿತ್ರ) 
ವಿದೇಶ

ಈಜಿಪ್ಟ್ ನಲ್ಲಿ ನಿರಾಶ್ರಿತರ ಬೋಟ್ ಮುಳುಗಡೆ; ಸಮುದ್ರದಲ್ಲಿ 162 ಶವಗಳ ಪತ್ತೆ!

ಈಜಿಪ್ಟ್ ಕರಾವಳಿಯಲ್ಲಿ ಇತ್ತೀಚೆಗೆ ಮುಳುಗಡೆಯಾಗಿದ್ದ ಅಕ್ರಮ ವಲಸಿಗರ ಬೋಟ್ ಪ್ರಕರಣದಲ್ಲಿನ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರೆಗೂ ಸಮುದ್ರದಿಂದ ಸುಮಾರು 162 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ರೊಸೆಟ್ಟಾ: ಈಜಿಪ್ಟ್ ಕರಾವಳಿಯಲ್ಲಿ ಇತ್ತೀಚೆಗೆ ಮುಳುಗಡೆಯಾಗಿದ್ದ ಅಕ್ರಮ ವಲಸಿಗರ ಬೋಟ್ ಪ್ರಕರಣದಲ್ಲಿನ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರೆಗೂ  ಸಮುದ್ರದಿಂದ ಸುಮಾರು 162 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಬುಧವಾರ ಕಾಫಿರ್-ಅಲ್-ಶೇಕ್ ಕರಾವಳಿ ತೀರದಿಂದ ಈಜಿಪ್ಟ್ ಕರಾವಳಿ ತೀರಕ್ಕೆ ಆಗಮಿಸುತ್ತಿದ್ದ ಬೋಟ್ ಮೆಡಿಟರೇನಿಯನ್ ಬಳಿ ಮುಳುಗಡೆಯಾಗಿದ್ದು, ಈ ವರೆಗೂ ಸುಮಾರು 162  ಶವಗಳನ್ನು ಹೊರತೆಗೆಯಲಾಗಿದೆ ಎಂದು ಬೆಹೈರಾ ಗವರ್ನರ್ ಮಹಮದ್ ಸುಲ್ತಾನ್ ಹೇಳಿದ್ದಾರೆ. ಮುಳುಗಡೆಯಾದವರಿಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ 30-40 ಮಂದಿ  ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗುತ್ತಿದೆ.

ಇನ್ನು ಮೀನು ಹಿಡಿಯುವ ಬಲೆಗಳನ್ನು ಹಾಕಿ ಶವಗಳನ್ನು ಮೇಲಕ್ಕೆ ತರುತ್ತಿರುವುದು ದುರಂತದ ಭೀಕರತೆಯನ್ನು ಬಿಂಬಿಸುತ್ತಿದೆ. ಇಡೀ ಸಮುದ್ರ ಶವಗಳಿಂದ ತುಂಬಿ ಹೋಗಿದೆ ಏನೋ ಎಂಬ  ಭಾವನೆ ಕೂಡ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಶಂಕಿಸಿರುವಂತೆ ಮಕ್ಕಳು ಮತ್ತು ಮಹಿಳೆಯರು ಸೇರಿ ಸುಮಾರು 450ಕ್ಕೂ ಹೆಚ್ಚು ಮಂದಿ ಮುಳುಗಿರುವ ಸಾಧ್ಯತೆ ಇದ್ದತು, ಈ ಸಂಖ್ಯೆ  600ಕ್ಕೇರಿದರೂ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಗಲಭೆ ಪೀಡಿತ ಸಿರಿಯಾ ಮತ್ತು ಆಫ್ರಿಕಾದಿಂದ ಈಜಿಪ್ಟ್ ಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಜಿಪ್ಟ್ ನಲ್ಲಿ ಆಶ್ರಯ ಪಡೆಯುವ ಸಲುವಾಗಿ ಲಕ್ಷಾಂತರ ಮಂದಿ ಅಕ್ರಮವಾಗಿ ಬೋಟ್ ಗಳ ಮೂಲಕ ಈಜಿಪ್ಟ್ ನತ್ತ ಧಾವಿಸುತ್ತಿದ್ದಾರೆ. ಪ್ರಸ್ತುತ ದುರಂತ ನಡೆದಿರುವ ಮೆಡಿಟರೇನಿಯನ್ ಸಮುದ್ರ ಮಾರ್ಗ ಹತ್ತಿರದ ಮಾರ್ಗವಾಗಿದ್ದು, ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಅಕ್ರಮವಾಗಿ ವಲಸಿಗರನ್ನು ಸಾಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆದರೆ ಬೋಟ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸಾಗಿಸುತ್ತಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚೆಚ್ಚು ದುರಂತಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT