ನವದೆಹಲಿ: 2008 ರ ಮುಂಬೈ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಜಾಗತಿಕ ಕ್ರಮಕ್ಕೆ ಭಾರತ ಕರೆ ನೀಡಿದೆ.
"ಅಂತಾರಾಷ್ಟ್ರೀಯ ಸಮುದಾಯ ಕೈಗೊಳ್ಳುವ ಕ್ರಮ, ಮುಂಬೈ ಉಗ್ರ ದಾಳಿಗೆ ನ್ಯಾಯ ಪಡೆಯುವ ಮೊದಲ ಹಂತವಾಗಿರಲಿದೆ" ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸುಮಾರು 2 ವಾರಗಳ ಕಾಲ ಗೃಹ ಬಂಧನ ವಿಧಿಸಿದ ಬಳಿಕ ಹಫೀಜ್ ಸಯೀದ್ ಹೆಸರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕ ವಿರೋಧಿ ಕಾಯ್ದೆ(ಎಟಿಎ) ಯಡಿಯಲ್ಲಿ ಸೇರಿತ್ತು.
ಪಾಕಿಸ್ತಾನದಿಂದ ಹೊರ ದೇಶಗಳಿಗೆ ಹೋಗುವುದಕ್ಕೂ ಸಹ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ನಿರ್ಬಂಧ ವಿಧಿಸಲಾಗಿದೆ. ಜ.30 ರಂದು ಹಫೀಜ್ ಸಯೀದ್ ಹಾಗೂ ಇತರ ನಾಲ್ವರು ಉಗ್ರರನ್ನು ಲಾಹೋರ್ ನಲ್ಲಿ ಗೃಹ ಬಂಧನದಲ್ಲಿರಿಸಲಾಗಿತ್ತು.