ಸಾಂದರ್ಭಿಕ ಚಿತ್ರ 
ವಿದೇಶ

ಪ್ಯಾರಿಸ್ ವಿಮಾನನಿಲ್ದಾಣದಲ್ಲಿ ಓರ್ವನ ಹತ್ಯೆ; ಗೊಂದಲಮಯ ವಾತಾವರಣ

ಪ್ಯಾರಿಸ್ ನ ಓರಲಿ ವಿಮಾನನಿಲ್ದಾಣದಲ್ಲಿ ಯೋಧರ ಗನ್ ಕಸಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ ಎಂದು ಮಾಧ್ಯಮವೊಂದು

ಪ್ಯಾರಿಸ್: ಪ್ಯಾರಿಸ್ ನ ಓರಲಿ ವಿಮಾನನಿಲ್ದಾಣದಲ್ಲಿ ಯೋಧರ ಗನ್ ಕಸಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಯೋಧ ಆ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ನಂತರ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರ ವಿಮಾನನಿಲ್ದಾಣದಲ್ಲಿ ಅಡಗಿರಬಹುದಾದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಶೋಧಿಸಲು ಎಲ್ಲರನ್ನು ಹೊರಕಳಿಸಿ ಖಾಲಿ ಮಾಡಲಾಗಿದೆ ಎಂದು ಮಿರರ್ ವರದಿ ಮಾಡಿದೆ. 
ನಂತರ ಆ ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಯಲಾಯಿತು ಎಂದು ಫ್ರಾನ್ಸ್ ನ ಬಿ ಎಫ್ ಎಂ ಟಿವಿ ವರದಿ ಮಾಡಿದೆ. 
ವಿಮಾನ ನಿಲ್ದಾಣದ ಭಾಗಗಳನ್ನು ಖಾಲಿ ಮಾಡಿಸಿ, ವಿಮಾನಗಳಲ್ಲಿದ್ದವರನ್ನು ಕೆಳಗಿಳಿಯುವುದರಿಂದ ತಡೆಯಲಾಯಿತು ಎಂದು ಗುಂಡಿನ ಶಬ್ದವನ್ನು ಕೇಳಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 
ಶನಿವಾರ ಬೆಳಕ್ಕೆ ದಕ್ಷಿಣ ಟರ್ಮಿನಲ್ ನಲ್ಲಿ ಗುಂಡಿನ ಶಬ್ದ ಕೇಳಿದ್ದಾಗಿಯೂ ಹಾಗೆಯೇ ಪೊಲೀಸರು ಭದ್ರತಾ ಕಾರ್ಯಾಚರಣೆ ನಡೆಸಿ ಎಲ್ಲರನು ಹೊರಕಳಿಸುತ್ತಿದ್ದುದನ್ನು ನೋಡಿದ್ದಾಗಿಯೂ ಕೆಲವು ಪ್ರಯಾಣಿಕರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. 
"ಪೊಲೀಸ್ ಕಾರ್ಯಾಚರಣೆ ಜಾರಿಯಲ್ಲಿದೆ. ಭದ್ರತಾ ಗಡಿಯನ್ನು ಯಾರು ದಾಟಬೇಡಿ ಮತ್ತು ಸೂಚನೆಗಳನ್ನು ಅನುಸರಿಸಿ" ಎಂದು ಪೊಲೀಸ್ ವಕ್ತಾರ ಟ್ವೀಟ್ ಮಾಡಿದ್ದಾರೆ. 
ದಿನದ ಕೊನೆಯ ಭಾಗದಲ್ಲಿ ಪ್ರಯಾಣ ಮಾಡಬೇಕಿದ್ದವರು ವಿಮಾನ ನಿಲ್ದಾಣಕ್ಕೆ ಬರದಂತೆ ಸೂಚಿಸಲಾಗಿದೆ. 
೨೦ ವರ್ಷದ ಈಜಿಪ್ಟ್ ಮೂಲದ ವ್ಯಕ್ತಿ ದಾಳಿಕೋರನಾಗಿದ್ದು ಅವನನ್ನು ಯೋಧ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಅವರ ಗುರುತು ಇನ್ನು ತಿಳಿಯಬೇಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT