ವಾಷಿಂಗ್ಟನ್: ಚೀನಾ ಸೇನೆಯಾ ಬೆದರಿಕೆಯನ್ನು ನಿಭಾಯಿಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಚೀನಾದ ಜತೆಗೆ ಪಾಕಿಸ್ತಾನ ಪರಮಾಣು ಬೆದರಿಕೆಯನ್ನು ನಿರೋಧಕವಾಗಿ ಬಳಸಿಕೊಳ್ಳುತ್ತೇವೆ. ಆದರೆ ಈ ಬೆದರಿಕೆ ಭಯೋತ್ಪಾದನೆಯ ಮೇಲೆ ನಡೆಯುತ್ತಿರುವ ಪ್ರಾಯೋಜಕತ್ವವನ್ನು ಇನ್ನಷ್ಟು ಹಾನಿಗೊಳಿಸುತ್ತದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಅಮೆರಿಕದಲ್ಲಿ ನಡೆದ "ಭಾರತದ ಭದ್ರತೆ" ಕುರಿತ ಪ್ರಧಾನ ಭಾಷಣದಲ್ಲಿ ಮಾತನಾಡಿದ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಮತ್ತು ಸೆಕ್ಯುರಿಟಿ ಅನಾಲಿಸಿಸ್ ನ ಮಾಜಿ ನಿರ್ದೇಶಕ ಜನರಲ್ ವೀರೇಂದ್ರ ಗುಪ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಪರಮಾಣು ಬೆದರಿಕೆಯನ್ನು ಮುಂದುವರೆಸುವುದನ್ನು ತಡೆಗಟ್ಟುವಂತೆ ಮಾಡುತ್ತೇವೆ. ಆದರೆ ಭಯೋತ್ಪಾದನೆಯ ಮೇಲೆ ನಡೆಯುತ್ತಿರುವ ಪ್ರಾಯೋಜಕತ್ವವನ್ನು ಇದು ಇನ್ನಷ್ಟು ಹೆಚ್ಚು ಹಾನಿಗೊಳ್ಳುತ್ತದೆ. ಹೀಗಾಗಿ ಪಾಕಿಸ್ತಾನ ಪರಮಾಣು ಬೆದರಿಕೆಯನ್ನು ನಿಲ್ಲಿಸಬೇಕು ಎಂದು ವೀರೇಂದ್ರ ಗುಪ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ಕುರಿತಾಗಿ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ, ಭಾರತವು ಪ್ರಾಯೋಜಿತ ಭಯೋತ್ಪಾದನೆಯನ್ನು ನಿಭಾಯಿಸಲು ಸ್ವತಃ ಸಿದ್ಧತೆ ನಡೆಸಬೇಕು. ಇನ್ನು ಭಾರತದಿಂದ ಭಯೋತ್ಪಾದನೆಯನ್ನು ಎದುರಿಸಲು ಗುಪ್ತಚರ ಹೂಡಿಕೆಯಲ್ಲಿ ಬಹುಪಾಲು ಏರಿಕೆ ಕಾಣಬೇಕಿದೆ ಎಂದರು.
ಇದೇ ವೇಳೆ ಡೋಕ್ಲಾಂ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು 1962ರ ನಂತರ ಭಾರತ, ಸೇನೆ ಮತ್ತು ರಾಜಕೀಯವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಗುಪ್ತಾ ಅವರು ಹೇಳಿದರು.